Mysore
24
mist

Social Media

ಶುಕ್ರವಾರ, 18 ಅಕ್ಟೋಬರ್ 2024
Light
Dark

ಗ್ರಾಮೀಣ ವೈದ್ಯರುಗಳಿಗೆ ಪುನರ್ ಶಿಕ್ಷಣ ಕಾರ್ಯಗಾರ

ಮೈಸೂರು: ವೈದ್ಯಕೀಯ ಕ್ಷೇತ್ರದಲ್ಲಿ ಶರವೇಗದಲ್ಲಿ ಸಂಶೋಧನೆಗಳು ಜರಗುತ್ತಿದ್ದು, ವೈದ್ಯರುಗಳು ಅವುಗಳನ್ನು ಅಧ್ಯಯನ ಮಾಡಿ ಅದಕ್ಕನುಗುಣವಾಗಿ ತಮ್ಮ ಚಿಕಿತ್ಸಾ ವಿಧಾನಗಳನ್ನು ಅನುಸರಿಸಬೇಕೆಂದು ಸುಯೋಗ್ ಆಸ್ಪತ್ರೆಯ ಅಧ್ಯಕ್ಷ ಡಾ.ಎಸ್.ಪಿ.ಯೋಗಣ್ಣ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಮೈಸೂರಿನ ಸುಯೋಗ್ ಆಸ್ಪತ್ರೆಯ ವತಿಯಿಂದ ಗ್ರಾಮೀಣ ವೈದ್ಯರುಗಳಿಗೆ ಆಯೋಜಿಸಿದ್ದ ಪುನರ್ ಶಿಕ್ಷಣ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಕ್ಕರೆ ಕಾಯಿಲೆ ಮತ್ತು ಏರು ರಕ್ತ ಒತ್ತಡದ ಕಾಯಿಲೆಗಳನ್ನು ಸೂಕ್ತ ಹಾಗೂ ನಿರಂತರ ಚಿಕಿತ್ಸಾ ವಿಧಾನಗಳಿಂದ ನಿಯಂತ್ರಣದಲ್ಲಿಟ್ಟುಕೊಳ್ಳಬಹುದೇ ವಿನಃ ಸಂಪೂರ್ಣವಾಗಿ ವಾಸಿವಾಡಲು ಸಾಧ್ಯವಿಲ್ಲ ಎಂಬ ವೈಜ್ಞಾನಿಕ ಸತ್ಯವನ್ನು ರೋಗಿಗಳಿಗೆ ವೈದ್ಯರು ಮನವರಿಕೆ ಮಾಡಿಕೊಡಬೇಕೆಂದರು.

ಸಕ್ಕರೆ ಕಾಯಿಲೆಯನ್ನು ಸಂಪೂರ್ಣವಾಗಿ ವಾಸಿವಾಡುತ್ತೇವೆ ಎಂಬ ಹುಸಿ ಜಾಹೀರಾತುಗಳಿಗೆ ಜನಸಾವಾನ್ಯರು ಮಾರುಹೋಗದಂತೆ ವೈದ್ಯರುಗಳು ಜನರಿಗೆ ಮನವರಿಕೆ ಮಾಡಿಕೊಡಬೇಕು.

ಜತೆಗೆ, ರೋಗಿಗಳಿಗೆ ವೈದ್ಯರುಗಳು ಚಿಕಿತ್ಸೆಯನ್ನು ಮಾತ್ರ ನೀಡದೆ ಅವರೊಂದಿಗೆ ಕಾಯಿಲೆಯ ಬಗ್ಗೆ ಚರ್ಚಿಸಿ ಪಾಲಿಸಬೇಕಾದ ಜೀವನಶೈಲಿ ಮತ್ತು ಔಷಧಗಳನ್ನು ಉಪಯೋಗಿಸುವ ವಿಧಿ ವಿಧಾನಗಳನ್ನು ಮನದಟ್ಟು ಮಾಡಿಕೊಡಬೇಕೆಂದು ತಿಳಿಸಿದರು.

ಸುಯೋಗ್ ಆಸ್ಪತ್ರೆಯ ಫಿಜೀಷಿಯನ್ ಡಾ.ಅಭಿಷೇಕ್ ಅವರು, ಏರು ರಕ್ತ ಒತ್ತಡದ ನಿುಯಂತ್ರಣದ ಬಗ್ಗೆ, ಸುಯೋಗ್ ಆಸ್ಪತ್ರೆಯ ಸಕ್ಕರೆ ಕಾಯಿಲೆ ತಜ್ಞ ಡಾ.ಅಭಿಲಾಶ್ ಅವರು, ಸಕ್ಕರೆ ಕಾಯಿಲೆಯ ಚಿಕಿತ್ಸಾ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಕಾರ್ಯಗಾರದಲ್ಲಿ ಸುವಾರು ೧೫೦ ಜನ ಗ್ರಾಮೀಣ ಪ್ರದೇಶದ ವೈದ್ಯರು ಪಾಲ್ಗೊಂಡಿದ್ದರು.

ಸುಯೋಗ್ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ.ಸುಯೋಗ್ ಯೋಗಣ್ಣ, ಸುಯೋಗ್ ಆಸ್ಪತ್ರೆುಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಯೋಗೇಶ್, ಆಸ್ಪತ್ರೆಯ ಜನರಲ್ ಮ್ಯಾನೇಜರ್‌ ಅರುಣ್ ಕುವಾರ್ ಇತರರು ಹಾಜರಿದ್ದರು.

Tags: