ಸರಗೂರು: ಕ್ಷೇತ್ರದ ಆದಿ ದೇವತೆ ಇಟ್ನಾ ಗ್ರಾಮದ ಶ್ರೀ ಚಿಕ್ಕದೇವಮ್ಮ ಬೆಟ್ಟದ ಯುಗಾದಿ ಹಬ್ಬದ ಜಾತ್ರಾ ಮಹೋತ್ಸವ ಮಾರ್ಚ್.19ರ ಯುಗಾದಿಯಂದು ನಡೆಯಲಿದ್ದು, ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ನಿರೀಕ್ಷೆಯಿದೆ.
ಯುಗಾದಿ ಹಬ್ಬದಂದು ನಡೆಯುವ ಈ ಜಾತ್ರೆ ಹಲವು ವಿಶೇಷಗಳಿಂದ ಕೂಡಿದೆ. ಜಾತ್ರೆಯ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ, ಅಭಿಷೇಕಗಳ ಜೊತೆಗೆ ಮಹಾನ್ಯಾಸ ಪೂರ್ವಕ ರುದ್ರಾಭಿಷೇಕ, ಮುತ್ತಿನ ಅಲಂಕಾರ, ಸಹಸ್ರ ನಾಮಾರ್ಚನೆ, ನಿವೇದನೆ, ಮಹಾಮಂಗಳಾರತಿ, ರಾಜೋಪಾಚಾರ, ರಾಷ್ಟ್ರಾರ್ಶಿವಾದ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ. ಬಳಿಕ ಪಾದ ಬೆಟ್ಟದ ಹಾಲುಗಡದ ಕಪಿಲಾ ನದಿಯ ದಂಡೆಯ ಮೇಲಿನ ಜಪ್ಪದಕಟ್ಟೆಯಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
ಬೆಟ್ಟ ತಲುಪಲು ಸರಗೂರು ಮಾರ್ಗವಾಗಿ ಪುರದಕಟ್ಟೆ ಮೂಲಕ ತಲುಪಬಹುದಾಗಿದ್ದು, ಮೈಸೂರಿನಿಂದ 52 ಕಿ.ಮೀ ಹಾಗೂ ಎಚ್ ಡಿ ಕೋಟೆ ಪಟ್ಟಣದಿಂದ 26 ಹಾಗೂ ಸರಗೂರಿನಿಂದ 14 ಕಿ ಮೀ ದೂರದಲ್ಲಿದೆ.
ಮೈಸೂರು, ಎಚ್.ಡಿ.ಕೋಟೆಯಿಂದ ಬರುವವರು ತುಂಬಸೋಗೆ, ಇಟ್ನಾ ಮಾರ್ಗವಾಗಿಯೂ ಬೆಟ್ಟ ತಲುಪಬುಹುದಾಗಿದೆ.





