Mysore
27
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಸಾಮವೇಶದಲ್ಲಿ ಭಾಗಿಯಾಗುವುದು ಬಿಡುವುದು ನಮಗೆ ಬಿಟ್ಟ ವಿಚಾರ : ಶ್ರೀನಿವಾಸ್‌ ಪ್ರಸಾದ್‌ !

ಮೈಸೂರು : ನಗರದಲ್ಲಿ ಇಂದು ನಡೆಯಲಿರುವ ಬಿಜೆಪಿ ಬೃಹತ್‌ ಸಮಾವೇಶದಲ್ಲಿ ಭಾಗಿಯಾಗಲು ಆಹ್ವಾನ ಬಂದಿದೆ ಆದರೆ ಭಾಗಿಯಾಗುವ ಬಗ್ಗೆ ತೀರ್ಮಾನ ನಮಗೆ ಬಿಟ್ಟಿದ್ದು ಎಂದು ಸಂಸದ ವಿ.ಶ್ರೀನಿವಾಸ್‌ ಪ್ರಸಾದ್‌ ತಿಳಿಸಿದ್ದಾರೆ.

ನಗರದ ಜಯಲಕ್ಷ್ಮಿಪುರಂನ ತಮ್ಮ ನಿವಾಸ ಭೀಮಸಧನದಲ್ಲಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಮನೆಗೆ ಭೇಟಿ ನೀಡಿ ನನ್ನ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಇಂದು ನಡೆಯಲಿರುವ ಬಜೆಪಿ ಸಮಾವೇಶದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದಾರೆ ಎಂದರು.

ಅವರ ಆಹ್ವಾನಕ್ಕೆ ಗೌರವ ನೀಡೋಣ, ಆದರೆ ಸಮಾವೇಶದಲ್ಲಿ ಭಾಗಿಯಾಗುವುದು ಬಿಡುವುದು ನಮಗೆ ಬಿಟ್ಟಿದ್ದು ಎಂದರು.

ಯಾರಿಗೆ ಮತ ಹಾಕಬೇಕು ಎಂಬುದು ಜನರು ಚಿಂತಿಸಲಿ : ನಾನು ರಾಜಕೀಯ ನಿವೃತ್ತಿಯನ್ನು ಘೋಷಿಸಿದ್ದೇನೆ. ನನ್ನ ಬೆಂಬಲಿಗರಿಗಾಗಲಿ, ಯಾವುದೇ ಪಕ್ಷದ ಮುಖಂಡರಿಗಾಲಿ ಅಥವ ಜನ ಸಾಮಾನ್ಯರಿಗಾಗಲಿ ಯಾರಿಗೆ ಮತ ಹಾಕ ಬೇಕು ಎಂದು ಸಲಹೆ ನೀಡುವುದಿಲ್ಲ.

ನಮ್ಮದು ಪ್ರಜಾಪ್ರಭುತ್ವ ದೇಶ ಮತದಾರರು ಬುದ್ದಿವಂತರಿದ್ದಾರೆ. ಯೋಚನೆ ಮಾಡುವ ಶಕ್ತಿ ಅವರಿಗಿದೆ. ಅವರು ಚಿಂತನೆ ಮಾಡಿ ಯಾರಿಗೆ ಬೇಕಾದರು ಮತ ನೀಡಲಿ ಎಂದರು.

Tags:
error: Content is protected !!