ನಂಜನಗೂಡು: ಜಿಂಕೆಯ ಮಾಂಸ ಕಡಿಯುತ್ತಿದ್ದ ವ್ಯಕ್ತಿಯ ಬಂಧನನಾಯಿಗಳ ದಾಳಿಗೆ ಮೃತಪಟ್ಟ ಜಿಂಕೆಯ ಮಾಂಸವನ್ನು ಕಡಿಯುತ್ತಿದ್ದ ವ್ಯಕ್ತಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಭಾನುವಾರ ಬಂಧಿಸಿದ್ದಾರೆ.
ತಾಲೂಕಿನ ಕೊತ್ತನಹಳ್ಳಿ ಗ್ರಾಮದ ಓಂಕಾರ್ ಅರಣ್ಯ ಪ್ರದೇಶದಲ್ಲಿ ಜಿಂಕೆಯೊಂದನ್ನು ನಾಯಿಗಳು ಬೇಟೆಯಾಡಿವೆ. ನಾಯಿಗಳ ದಾಳಿಕೆ ಜಿಂಕೆ ಬಲಿಯಾಗಿದ್ದು, ನಾಯಿಗಳು ಭೇಟಿಯಾಡಿದ್ದ ಜಿಂಕೆಯನ್ನು ಕೊತ್ತನಹಳ್ಳಿ ಗ್ರಾಮದ ಗಣೇಶ್ (48), ಮತ್ತು ಕೃಷ್ಣ (32) ಎಂಬುವವರು ಮಾಂಸವನ್ನು ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಇದರಲ್ಲಿ ಗಣೇಶ್ ಎಂಬಾತನನ್ನು ಇಲಾಖಾ ಅಧಿಕಾರಿಗಳು ಬಂಧಿಸಲಾಗಿದ್ದು, ಮತ್ತೋರ್ವ ಕೃಷ್ಣ ಸ್ಥಳದಿಂದ ಪರಾರಿಯಾಗಿದ್ದಾನೆ.
ಅರಣ್ಯ ಇಲಾಖೆ ಅಧಿಕಾರಿಗಳು ಜಿಂಕೆಯ ಮಾಂಸ ಮತ್ತು ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಪರಾರಿಯಾಗಿರುವ ವ್ಯಕ್ತಿಗಾಗಿ ಅಧಿಕಾರಿಗಳು ಬಲೆ ಬೀಸಿದ್ದಾರೆ.
ಓಂಕಾರ್ ಅರಣ್ಯ ವ್ಯಾಪ್ತಿಯ ವಲಯ ಅರಣ್ಯಾಧಿಕಾರಿ ಸತೀಶ್ ಹಾಗೂ ಸಿಬ್ಬಂದಿಗಳು ಈ ದಾಳಿ ಮಾಡಿದ್ದು, ಪ್ರಕರಣ ದಾಖಲಾಗಿದೆ.