Mysore
24
haze

Social Media

ಭಾನುವಾರ, 01 ಮಾರ್ಚ್ 2026
Light
Dark

ಮೈಸೂರು | ಉದ್ಯಾನದಲ್ಲಿ ಚಿರತೆ ಕಂಡ ವದಂತಿ; ಪರಿಶೀಲನೆ

ಮೈಸೂರು: ಇಲ್ಲಿನ ಕುವೆಂಪುನಗರದ ವಿಜಯ್‌ ಬ್ಯಾಂಕ್‌ ವೃತ್ತ ಸಮೀಪದ ವಿಶ್ವನಂದನ ಉದ್ಯಾನದ ಬಳಿ ಗುರುವಾರ ಮುಂಜಾನೆ ಚಿರತೆ ಕಾಣಿಸಿಕೊಂಡ ವದಂತಿ ಕಾರಣ, ಚಿರತೆ ಕಾರ್ಯಪಡೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು.

ವಿಶ್ವನಂದನ ಪಾರ್ಕ್‌ನಲ್ಲಿ ಚಿರತೆ ಕಂಡುಬಂದ ಹಿನ್ನೆಲೆ ಪಾರ್ಕ್‌ಗೆ ಮುಖ್ಯದ್ವಾರಕ್ಕೆ ಬೀಗ ಜಡಿಯಲಾಗಿದೆ. ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದ್ದು, ಚಿರತೆ ಸೆರೆಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿಗಳು ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಬೆಳಿಗ್ಗೆ 7 ಗಂಟೆಗೆ ಧಾವಿಸಿದ ಕಾರ್ಯಪಡೆ ಸಿಬ್ಬಂದಿ ಗಂಟೆಗೂ ಹೆಚ್ಚು ಕಾಲ ಪರಿಶೀಲಿಸಿದರು.

ಹೆಚ್ಚೆ ಗುರುತು, ಸುಳಿವು ಪತ್ತೆ ಆಗಿಲ್ಲ. ಉದ್ಯಾನದ ಸುತ್ತಮುತ್ತಲ ಮನೆಗಳ ಸಿಸಿಟಿವಿ ಕ್ಯಾಮೆರಾಗಳನ್ನು ನೋಡಲಾಗುವುದು. ಕಂಡು ಬಂದಿದ್ದರೆ, ಮತ್ತೆ ಬಂದು ಪರಿಶೀಲಿಸುತ್ತೇವೆ ಎಂದು ಕಾರ್ಯಪಡೆ ಸಿಬ್ಬಂದಿಯೊಬ್ಬರು ತಿಳಿಸಿದರು.

Tags:
error: Content is protected !!