ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಪ್ರಸಕ್ತ ಸಾಲಿನ ಸ್ವಚ್ಛ ಸರ್ವೇಕ್ಷಣ್ ಅಭಿಯಾನ-2024ರಲ್ಲಿ ಮೈಸೂರು ಉತ್ತಮ ಶ್ರೇಯಾಂಕ ಪಡೆಯುವ ಉದ್ದೇಶದಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ರಾಯಭಾರಿಗಳಾಗಿ ನೇಮಿಸಲಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು 2014 ರಿಂದ ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ ನಡೆಸುತ್ತಿದೆ. ಇಲ್ಲಿಯವರೆಗೂ ಮೈಸೂರು ನಗರವು ಉತ್ತಮ ಶ್ರೇಯಾಂಕಗಳನ್ನು ಗಳಿಸುತ್ತಾ ಬಂದಿದೆ. ಪ್ರಸಕ್ತ ಸಾಲಿನ ಸ್ವಚ್ಛ ಸರ್ವೇಕ್ಷಣ್ 2024 ರಲ್ಲಿಯೂ ಕೂಡ ಮೈಸೂರು ನಗರ ಭಾಗವಹಿಸುತ್ತಿದೆ. ಹೀಗಾಗಿ ಫೆಬ್ರವರಿ.15 ರಂದು ದೇಶದ್ಯಾದಂತ ಸರ್ವೇ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇನ್ನೂ ಈ ಸರ್ವೇ ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆಯೂ ಉತ್ತಮ ಶ್ರೇಯಾಂಕಗಳಿಸುವ ಸಲುವಾಗಿ ಇಂದು(ಫೆಬ್ರವರಿ.12) ಶ್ರೀ ಜಯಚಾಮರಾಜ ಒಡೆಯರ್ ಸಭಾಂಗಣದಲ್ಲಿ ವಿವಿಧ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ ಈ ಕೆಳಕಂಡ ಸಾಧಕರುಗಳನ್ನು ಸ್ವಚ್ಛತಾ ರಾಯಭಾರಿಗಳನ್ನಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ.
1. ಕ್ರೀಡಾ ಕ್ಷೇತ್ರ- ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್
2. ಕ್ರೀಡಾ ಕ್ಷೇತ್ರ- ಮಹಿಳಾ ಕ್ರಿಕೆಟ್ ಆಟಗಾರ್ತಿ ವೇದಾಕೃಷ್ಣ ಮೂರ್ತಿ
3. ಸಂಗೀತ ಕ್ಷೇತ್ರ- ಗಾಯಕಿ ಅನನ್ಯ ಭಟ್
4. ಸಾಮಾಜಿಕ ಮಾಧ್ಯಮ- ಸೋಷಿಯಲ್ ಮೀಡಿಯಾ ಇನ್ಫೂಯೇನ್ಸರ್ ಧರ್ಮೇಂದ್ರ
5. ಚಲನಚಿತ್ರ ಕ್ಷೇತ್ರ- ನಟಿ ಅಮೃತಾ ಅಯ್ಯಂಗಾರ್
6. ಪರ್ವತಾ ರೋಹಿ- ಡಾ.ಉಷಾ ಹೆಗಡೆ
7. ಕ್ರೀಡಾ ಕ್ಷೇತ್ರ- ಖೋ-ಖೋ ಆಟಗಾರ್ತಿ ಬಿ.ಚೈತ್ರ
ಮೈಸೂರು ನಗರದ ಸ್ವಚ್ಛತೆಗೆ ಹಾಗೂ ನೈರ್ಮಲ್ಯವನ್ನು ಕಾಪಾಡುವ ಸಲುವಾಗಿ ಸ್ವಯಂಪ್ರೇರಿತರಾಗಿ ಸ್ವಚ್ಛತಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪಾಲಿಕೆಯೊಂದಿಗೆ ಕೈ ಜೋಡಿಸುತ್ತಿರುವ ಈ ಕೆಳಕಂಡ ವ್ಯಕ್ತಿಗಳನ್ನು ಸ್ವಚ್ಛತಾ ಚಾಂಪಿಯನ್ಗಳೆಂದು ಗುರುತಿಸಿ ಗೌರವಿಸಲಾಯಿತು.
1.ಡಾ.ಪಿ.ಎಸ್.ಮಧುಸೂದನ್
2. ಲೀಲಾ ವೆಂಕಟೇಶ್
3. ಡಾ.ಅಜಯ್ ಕುಮಾರ್ ಜೈನ್
4. ಡಾ.ಸ್ವಪ್ನ
5. ಎನ್. ರಾಘವನ್
6. ಸೈಯದ್ ಅಬ್ದುಲ್ ಅಜೀಜ್
7. ಅಮೂಲ್ಯ





