Mysore
23
clear sky

Social Media

ಮಂಗಳವಾರ, 07 ಏಪ್ರಿಲ 2026
Light
Dark

ಮೈಸೂರು: ಲೋಕಾಯುಕ್ತ ಪೊಲೀಸರಿಂದ ಏಳು ಕಡೆ ದಾಳಿ: ದಾಖಲೆಗಳ ಪರಿಶೀಲನೆ

ಮೈಸೂರು: ಆದಾಯಕ್ಕಿಂತ ಹೆಚ್ಚು ಹಣ ಸಂಪಾದಿಸಿದ್ದಾರೆ ಎಂಬ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಏಳು ಕಡೆ ದಾಳಿ ನಡೆಸಿದ್ದಾರೆ.

ಜ್ಯೂನಿಯರ್‌ ಎಂಜಿನಿಯರ್‌ ಕೆ.ಆರ್.ಚಂದ್ರಶೇಖರ್‌, ಆಲ್ತಾಫ್‌ ಹುಸೇನ್‌ ಜಪ್ಪಾರ್ಪಿ ಸೇರಿದಂತೆ ಹಲವರು ದಾಳಿಗೊಳಗಾದವರಾಗಿದ್ದು, ಮನೆ ಹಾಗೂ ಕಚೇರಿಗಳಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮೈಸೂರು ನಗರದ ವಿಜಯನಗರ ಮೊದಲ ಹಂತ, ಎರಡನೇ ಹಂತ ಸೇರಿದಂತೆ ಆರು ಕಡೆ ಹಾಗೂ ಟಿ.ನರಸೀಪುರದಲ್ಲಿ ಒಂದು ಕಡೆ ದಾಳಿ ನಡೆಸಿದ್ದು, ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

 

Tags:
error: Content is protected !!