ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ದಸರಾ ಸಂಭ್ರಮ ಕಳಗಟ್ಟಿದ್ದು, ಅಂತಿಮ ಹಂತದ ತಯಾರಿಗಳು ಜೋರಾಗಿ ಸಾಗಿದೆ. ಈಗಾಗಲೇ ಗಜ ಪಡೆಗಳ ತಾಲೀಮು ಮುಗಿದಿದ್ದು, ಅಂತಿಮ ಕ್ಷಣದ ತಾಲೀಮು ನಡೆಯುತ್ತಿದೆ. ಇನ್ನೊಂದು ಕಡೆ ಗಜಪಡೆಗಳ ಸಿಂಗಾರ ಪ್ರಕ್ರಿಯೆ ಕೂಡ ನಡೆಯುತ್ತಿದೆ. ಮರಳಿನ ಚೀಲಗಳನ್ನು ಹೊರಿಸಿ ಗಜ ಪಡೆಗಳನ್ನು ಜಂಬೂಸವಾರಿಗೆ ಅಣಿಗೊಳಿಸಲಾಗುತ್ತಿದೆ. ಅಂತಿಮ ಕ್ಷಣದಲ್ಲಿ ಯಾವುದೇ ಏರುಪೇರು ಆಗದಿರಲಿ ಎನ್ನುವ ಕಾರಣಕ್ಕೆ ಕೊನೆ ಕ್ಷಣದ ತಾಲೀಮುಗಳು ನಡೆಯುತ್ತಿವೆ.