Mysore
32
scattered clouds

Social Media

ಭಾನುವಾರ, 06 ಏಪ್ರಿಲ 2025
Light
Dark

ರೈಲ್ವೆ ಅಧಿಕಾರಿಗೆ ಕೇಂದ್ರ ಸಚಿವ ವಿ. ಸೋಮಣ್ಣರಿಂದ ʼಕನ್ನಡʼದ ಪಾಠ

ಮೈಸೂರು : ಹಿಂದಿ ಮಾತನಾಡುತ್ತಿದ್ದ ರೈಲ್ವೆ ಅಧಿಕಾರಿಗೆ ಕನ್ನಡ ಕಲಿಯುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ಕ್ಲಾಸ್ ತಗೊಂಡಿದ್ದಾರೆ.

ಇಂದು ಮೈಸೂರಿನ ಅಶೋಕಪುರಂ ರೈಲ್ವೆ ನಿಲ್ದಾಣಕ್ಕೆ ಸಚಿವ ಭೇಟಿ ನೀಡಿ ಪರಿಶೀಲನೆ ನಡೆಸಿ ರೈಲ್ವೆ ಕಾಮಗಾರಿ ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಈ ವೇಳೆ ಕನ್ನಡ ಬರದೇ ಹಿಂದಿಯಲ್ಲಿ ವಿವರಿಸಿದ ರೈಲ್ವೆ ಅಧಿಕಾರಿಯಾದ DRM ಶಿಲ್ಪಾ ಅಗರ್ವಾವಾಲ್ ಅವರಿಗೆ ಸಚಿವ ವಿ ಸೋಮಣ್ಣ  ಕ್ಲಾಸ್ ತೆಗೆದುಕೊಂಡಿದ್ದಾರೆ.

ಕರ್ನಾಟಕಕ್ಕೆ ಬಂದು ಎಷ್ಟು ವರ್ಷ ಆಯ್ತಮ್ಮ? ಹೋಗಿ 3 ರೂಪಾಯಿ ಕೊಟ್ಟು ಒಂದ್ ಕನ್ನಡ ಪುಸ್ತಕ ತಗೊಂಡ್ ಕಲಿ.
ಕನ್ನಡ ಕಲಿಯೋಕೆ ಕೇವಲ 3 ರೂಪಾಯಿ ಇನ್ವೆಸ್ಟ್ ಮಾಡಮ್ಮ ಸಾಕು. ನಾನು ಡೆಲ್ಲಿಗೆ ಹೋಗಿ ಹಿಂದಿ ಕಲಿತಿದೀನಿ. ಮೈಸೂರಿಗೆ ಬಂದು ಎರಡು ವರ್ಷವಾಗಿದ್ರು ಕನ್ನಡ ಕಲಿತಿಲ್ವ ಎಂದು ಪ್ರಶ್ನಿಸಿದರು.

ಬಳಿಕ ಅಧಿಕಾರಿಗಳೊಂದಿಗೆ ಹಿಂದಿಯಲ್ಲೇ ಮಾತನಾಡಿ ಸಚಿವ ವಿ ಸೋಮಣ್ಣ ವಿವರ ಪಡೆದುಕೊಂಡರು.

Tags: