ಹುಣಸೂರು : ತಾಲೂಕಿನ ಕಲ್ಕುಣಿಕೆಯಲ್ಲಿ ಜಮೀನು ವಿಚಾರವಾಗಿ ಗಲಾಟೆ ನಡೆದು ವ್ಯಕ್ತಿಯೊಬ್ಬರ ಮೇಲೆ ಸಾರ್ವಜನಿಕವಾಗಿ ಹಲ್ಲೆ ಮಾಡಲಾಗಿದೆ.
ಕಲ್ಕುಣಿಕೆಯ ರೈತ ಮಹದೇವ (45) ಹಲ್ಲೆಗೊಳಗಾದ ವ್ಯಕ್ತಿ. 5 ರಿಂದ 6 ಎಕರೆ ಕುಷ್ಕಿ ಜಮೀನು ವಿಚಾರವಾಗಿ ಗಲಾಟೆ ನಡೆದಿದ್ದು, ಮಹದೇವ ಅವರ ತಾತನ ಮಕ್ಕಳಾದ ಶಿವರಾಜು, ಸುರೇಶ್, ಬಸವರಾಜು, ರವಿ, ಗುಂಡಪ್ಪ, ಮಹದೇವ, ಸ್ವಾಮಿ ಅವರಿಂದ ಹಲ್ಲೆ ಆರೋಪ ಮಾಡಿದ ಕೇಳಿಬಂದಿದೆ.
ಹಲ್ಲೆಗೊಳಗಾದ ರೈತ ಮಹದೇವ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಈ ಬಗ್ಗೆ ಠಾಣೆಯಲ್ಲಿ ಯಾವುದೇ ಎಫ್ ಐ ಆರ್ ದಾಖಲಾಗಿಲ್ಲ.





