ಮೈಸೂರು : ಮಾಜಿ ಸೇನಾಧಿಕಾರಿ ಕೃಷ್ಣಮೂರ್ತಿ ವಿಧಿವಶರಾಗಿದ್ದಾರೆ. ವಯೋಸಹಜ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೃಷ್ಣಮೂರ್ತಿ ಅವರು ಲಕ್ಷ್ಮೀ ಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಮೃತ ಸೇನಾಧಿಕಾರಿ ಕೃಷ್ಣಮೂರ್ತಿ ಅವರು ರಜಪೂತ್ ರೆಜಮೆಂಟ್ನಲ್ಲಿ ಸೇವೆ ಸಲ್ಲಿಸಿದ್ದರು,1971ರ ಯುದ್ದದಲ್ಲಿಯೂ ಕೂಡ ಭಾಗವಹಿಸಿದ್ದರು.
ಮೃತರಿಗೆ ಮೈಸೂರು ಎಕ್ಸ್ ಸರ್ವಿಸ್ ಮೆನ್ ಮೂವ್ಮೆಂಟ್ (ರಿ ) ಸಂಸ್ಥಾಪಕರಾದ ಶ್ರೀಯುತ ಮಹೇಶ್ ವಿ,ಅಧ್ಯಕ್ಷರಾದ ಶ್ರೀಯುತ ಪ್ರಿನ್ಸ್ ಮತ್ತು ಪದಾಧಿಕಾರಿಗಳು ಹಾಗೂ ಸುಮಾರು 25 ಸದಸ್ಯರು ರಿತ್ ಪೆರೇಡ್ ಮಾಡಿ ವಿಜಯ ಘೋಷಣೆ ಕೂಗಿ ಗೌರವ ಸಲ್ಲಿಸಿದರು.





