ಹುಣಸೂರು: ಸಾಲಬಾಧೆಯಿಂದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಹೇಜ್ಜೂರು ಗ್ರಾಮದಲ್ಲಿ ಭಾನುವಾರ ನಡೆದಿದೆ.
ಚಿಕ್ಕಹೇಜ್ಜೂರು ಗ್ರಾಮದ ಮಹಾದೇವಪ್ಪ(69) ಆತ್ಮಹತ್ಯೆ ಮಾಡಿಕೊಂಡ ರೈತ.
ಬೆಳೆ ಬೆಳೆಯಲು ದೊಡ್ಡಹೇಜ್ಜೂರು ಸೊಸೈಟಿ ಹಾಗೂ ವಿವಿಧೆಡೆ ಸಾಲ ಕೂಡ ಮಾಡಿಕೊಂಡಿದ್ದರು ಎನ್ನಲಾಗಿದೆ. ಟ್ರಾಕ್ಟರ್ನ್ನೂ ಖಾಸಗಿ ಫೈನಾನ್ಸ್ನಲ್ಲಿ ಸಾಲ ತೆಗೆದುಕೊಂಡಿರುವುದರಿಂದ ಫೈನಾನ್ಸ್ನವರು ನೋಟಿಸ್ ನೀಡಿದ್ದರು.
ಇದನ್ನೂ ಓದಿ:- ರೈತರಿಗೆ ಮತ್ತೊಂದು ಗುಡ್ನ್ಯೂಸ್: ಕುಸುಮ್-ಸಿ ಸೋಲಾರ್ ಯೋಜನೆ ಜಾರಿ
ತಾವು ಬೆಳೆದ ಬೆಳೆಗಳು ಅತಿವೃಷ್ಟಿಯಿಂದಾಗಿ ನಾಶಗೊಂಡಿದ್ದರಿಂದ ಫಸಲು ಕೈ ಸೇರಿಲ್ಲ, ಮಾಡಿದ್ದ ಸಾಲವನ್ನು ಹೇಗೆ ತೀರಿಸುವುದು ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.





