ಮೈಸೂರು : ಪರಿಸರ ದಿನಾಚರಣೆ ಅಂಗವಾಗಿ ನಗರದಲ್ಲಿ 500ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನು ವಿತರಿಸಲಾಯಿತು.
ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಡಾ.ಎಚ್.ಎ ಶಶಿರೇಖಾ ಸ್ನಾಯೀ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಔಷಧೀಯ ಸಸ್ಯಗಳನ್ನು ವಿತರಿಸಲಾಯಿತು. ಬಳಿಕ ಕರ್ನಾಟಕ ಪೋಲೀಸ್ ಅಕಾಡೆಮಿ ಸಹಾಯಕ ನಿರ್ದೇಶಕರು ಟಿ.ಕುಮಾರ್ ಗಿಡ ನೆಟ್ಟು ಗಿಡಕ್ಕೆ ನೀರು ಹಾಕುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಲೇಖಕ ಡಾ.ಪಿ.ಸತ್ಯ ನಾರಾಯಣ ಭಟ್, ಡಾ.ಜೋತಿ ಹಳ್ಳಿ, ಡಾ.ರಾಜಶ್ರೀ ಪೋಲ್, ಡಾ.ಶ್ರೀವತ್ಸ, ಎನ್ಎಸ್ಎಸ್ ಯೋಜನಾಧಿಕಾರಿ ಡಾ.ಶ್ರೀನಿವಾಸ್ ಯಾದವ್, ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ವೀಣಾ ನಾಯಕ್ ಉಪಸ್ಥಿತರಿದ್ದರು.





