Mysore
20
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ಮೈಸೂರಿನಲ್ಲಿ ಮರಗಳ ಹನನ ; ಪರಿಸರ ಪ್ರೇಮಿಗಳ ಸಭೆಯಲ್ಲಿ ಮಹತ್ವದ ತೀರ್ಮಾನ?

ಮೈಸೂರು : ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ರಸ್ತೆ ಅಗಲೀಕರಣದ ನೆಪಹೇಳಿ ರಾತ್ರೋರಾತ್ರಿ 40ಕ್ಕೂ ಹೆಚ್ಚು ಮರಗಳನ್ನು ಕಡಿದಿರುವುದು ನಗರದ ಜನತೆ ಹಾಗೂ ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಸದ್ಯ ಮರ ನಾಶ ಮಾಡಿದ ವಿಚಾರ ಖಂಡಿಸಿ ನಗರದ ವಿವಿಧ ಸಂಘಟನೆಗಳು ಯಾದವಗಿರಿಯ ಚೆಲುವಾಂಬ ಪಾರ್ಕಿನಲ್ಲಿ ಸೋಮವಾರ(ಏ.14) ಸಭೆ ನಡೆಸಿವೆ.

ಪರಿಸರ ಬಳಗ, ಕ್ಲೀನ್ ಮೈಸೂರು ಫೌಂಡೇಷನ್ ಹಾಗೂ ಮೈಸೂರು ಗ್ರಾಹಕ ಪರಿಷತ್ ವತಿಯಿಂದ ಸಭೆ ನಡೆದಿದ್ದು, ಸಭೆಯಲ್ಲಿ ಹಲವು ಮಹತ್ವಗಳನ್ನು ಕೈಗೊಳ್ಳಲಾಗಿದೆ.

ಮೊದಲಿಗೆ ಏ.17 ರಂದು ನಾಶವಾದ ಮರಗಳಿಗೆ ಕ್ಯಾಂಡಲ್ ಲೈಟ್ ಮೂಲಕ ಶ್ರದ್ಧಾಂಜಲಿ ಅರ್ಪಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು. ಏ.18ರಂದು ಪಾಲಿಕೆ, ಡಿಸಿ ಕಚೇರಿ, ಅರಣ್ಯ ಇಲಾಖೆ ಮುಂಭಾಗ ಶಾಂತಿಯುತ ಪ್ರತಿಭಟನೆಗೆ ಕರೆ ನೀಡಲಾಯಿತು.

ಮರ ನಾಶಪಡಿಸಿದ ಅಧಿಕಾರಿಗಳಿಂದಲೇ ಅದೇ ಸ್ಥಳದಲ್ಲೇ 40ಕ್ಕೂ ಹೆಚ್ಚು ಗಿಡಗಳನ್ನು ನೆಡಿಸಲು ತೀರ್ಮಾನ ಮಾಡಲಾಯಿತು. ಇನ್ನೂ ಕಾನೂನು ಹೋರಾಟಕ್ಕೂ ಪರಿಸರವಾದಿಗಳಿಂದ ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.

ಸಭೆಯಲ್ಲಿ ಪರಿಸರ ಬಳಗದ ಸಂಸ್ಥಾಪಕ ಸದಸ್ಯ ಪರುಶುರಾಮೇಗೌಡ, ಮೇಜರ್ ಜನರಲ್ ಸುಧೀರ್ ಒಂಭತ್ತು ಕೆರೆ, ಪ್ರೋ.ಕಾಳಚೆನ್ನೇಗೌಡ, ಕ್ಲೀನ್ ಮೈಸೂರು ಫೌಂಡೇಷನ್ ಲೀಲಾ ವೆಂಕಟೇಶ್, ಲೀಲಾ ಶಿವಕುಮಾರ್ ಪರಿಸರವಾದಿ ಶೈಲಜೇಶ್, ಬರಹಗಾರ್ತಿ ಕುಸುಮ, ಲೆಟ್ಸ್ ಡೂ ಇಟ್ ಸಂಸ್ಥೆಯ ಪ್ರಶಾಂತ್, ಸೇರಿದಂತೆ ಹಲವಾರು ಪರಿಸರ ಪ್ರೇಮಿಗಳು ಭಾಗಿಯಾಗಿದ್ದರು.

Tags:
error: Content is protected !!