ಮೈಸೂರು: ಮಂಗಳೂರಿನಲ್ಲಿ ಬಾಂಬ್ ಸ್ಪೋಟ ಮಾಡಿರುವ ಶಂಕಿತ ಉಗ್ರ ಮೈಸೂರಿನಲ್ಲಿ ನೆಲೆಸಿದ್ದನು. ಮೈಸೂರಿನ ಲೋಕನಾಯಕನಗರದ 10 ನೇ ಕ್ರಾಸ್ ನಲ್ಲಿರುವ ಮೋಹನ್ ಕುಮಾರ್ ಎಂಬುವರ ಮನೆ ಬಾಡಿಗೆ ಮನೆ ಪಡೆದಿರರುವ ಶಂಕಿತ ಉಗ್ರ ಮಂಗಳೂರಿನಲ್ಲಿ ಈ ಕೃತ್ಯ ಎಸಗಿದ್ದಾನೆ.
ಬಾಡಿಗೆ ಮನೆ ಅಗ್ರಿಮೆಂಟ್ ಗೆ ಹುಬ್ಬಳ್ಳಿಯ ಪ್ರೇಮ್ ರಾಜ್ ಎಂಬುವರ ಆಧಾರ್ ಕಾರ್ಡ್ ನೀಡಿರುವ ಶಂಕಿತ ಉಗ್ರನ ನಡೆ ಬಗ್ಗೆ ಹಲವು ಅನುಮಾನ ಬಂದಿದೆ. ಮೈಸೂರು- ಮಂಗಳೂರಿನಲ್ಲಿ ನಡೆದಿರುವ ಬಾಂಬ್ ಸ್ಪೋಟಕ್ಕೆ ಸಾಂಸ್ಕೃತಿಕ ನಗರಿ ಮೈಸೂರು ಮೂಲದ ನಂಟು ಇದೆ ಎಂದು ತಿಳಿದುಬಂದಿದೆ.





