Mysore
24
scattered clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ಪಾಂಡವಪುರ: ಪರಿಹಾರ ವಿಳಂಬ, ಬಸ್‌ ಜಪ್ತಿಗೆ ಪಟ್ಟಣ ನ್ಯಾಯಾಲಯ ಆದೇಶ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಬಸ್‌ ನಿಲ್ದಾಣದಲ್ಲಿ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ಕೆಎಸ್‌ಆರ್‌ಟಿಸಿ ಸಂಸ್ಥೆಯೂ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಬಸ್‌ ಜಪ್ತಿ ಮಾಡುವಂತೆ ಪಟ್ಟಣ ನ್ಯಾಯಾಲಯ ಆದೇಶ ಹೊರಡಿಸಿದೆ.

ಇತ್ತೀಚೆಗೆ ಅಷ್ಟೇ ಪಾಂಡಪುರ ತಾಲ್ಲೂಕಿನ ಬಸ್‌ನಿಂದ ಅಪಘಾತವಾಗಿತ್ತು. ಈ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬಕ್ಕೆ ಪರಿಹಾರ ನೀಡಲು ವಿಳಂಬ ಮಾಡಿದ ಹಿನ್ನೆಲೆ ನ್ಯಾಯಾಲಯ ಆದೇಶದಂತೆ ಇಂದು(ಮಾರ್ಚ್.‌18 ಕೆಎಸ್‌ಆರ್‌ಟಿಸಿ ಸಂಸ್ಥೆಯ ಎರಡು ಬಸ್‌ಗಳನ್ನು ಜಪ್ತಿ ಮಾಡಲಾಗಿದೆ.

ಇನ್ನು ಈ ಪಟ್ಟಣದಲ್ಲಿರುವ ನ್ಯಾಯಾಲಯ ಆದೇಶದ ಮೇರೆಗೆ ವಕೀಲ ಸಿ.ಆರ್.ಮಂಜುನಾಥ್ ಹಾಗೂ ಅಮಿನ್‌ಗಳಾದ ನರಸಿಂಹಮೂರ್ತಿ, ವೇಣುಗೋಪಾಲ್, ಸತೀಶ, ವಿನಯ್ ಅವರುಗಳು ಪಾಂಡವಪುರ ಕೆಎಸ್ಆರ್‌ಟಿಸಿ ಡಿಪ್ಪೋದಲ್ಲಿದ್ದ ಎರಡು ಬಸ್‌ಗಳನ್ನು ನ್ಯಾಯಾಲಯದ ವಶಕ್ಕೆ ಪಡೆದುಕೊಳ್ಳಲಾಗಿದೆ.

Tags:
error: Content is protected !!