Mysore
19
clear sky

Social Media

ಗುರುವಾರ, 05 ಫೆಬ್ರವರಿ 2026
Light
Dark

ಚಂದ್ರಶೇಖರ ಸ್ವಾಮೀಜಿ ಮೇಲಿನ FIR ಹಿಂಪಡೆಯಲು ಒಕ್ಕಲಿಗ ಸೇವಾ ಸಂಸ್ಥೆ ಮನವಿ

ಮಂಡ್ಯ: ವಿಶ್ವ ಮಾನವ ಒಕ್ಕಲಿಗರ ಮಠದ ಚಂದ್ರಶೇಖರ ಸ್ವಾಮೀಜಿ ಅವರ ಮೇಲೆ ಹಾಕಿರುವ ಎಫ್‌ಐಆರ್ ಅನ್ನು ಸರ್ಕಾರ ಹಿಂಪಡೆಯಲು ಮುಂದಾಗಬೇಕು ಎಂದು ಒಕ್ಕಲಿಗ ಸೇವಾ ಟ್ರಸ್ಟ್‌ನ ಅಧ್ಯಕ್ಷ ತಮ್ಮಯ್ಯ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾಮೀಜಿ ಅವರಿಗೆ ವಯಸ್ಸಾಗಿದ್ದು, ಹಿರಿಯರೂ ಆಗಿದ್ದು, ಬಾಯ್ತಪ್ಪಿನಿಂದ ಹೇಳಿಕೆ ನೀಡಿದ್ದರು. ತಮ್ಮ ಹೇಳಿಕೆಯಿಂದ ತಪ್ಪಾಗಿದೆಯೆಂದು ಕ್ಷಮೆಯನ್ನೂ ಕೇಳಿದ್ದಾರೆ. ಅದನ್ನು ಪರಿಗಣಿಸಿ, ಸರ್ಕಾರ ಎಫ್‌ಐಆರ್‌ನ್ನು ಹಿಂಪಡೆಯಬೇಕೆಂದು ಕೋರಿದರು.

ಸದರಿ ಸ್ವಾಮಿಗಳು ಒಂದು ಸಮುದಾಯಕ್ಕೆ ಮಾತ್ರ ಸ್ವಾಮೀಜಿಗಳಲ್ಲ, ಒಂದು ವೇಳೆ ಸರ್ಕಾರ ಎಫ್‌ಐಆರ್ ಹಿಂಪಡೆಯದೇ ಇದ್ದರೆ ಒಕ್ಕಲಿಗ ಸಮುದಾಯದ ಸೇರಿದಂತೆ ಎಲ್ಲಾ ಸಂಘ ಸಮಸ್ಥೆಗಳು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಟ್ರಸ್ಟ್‌ನ ಕಾರ್ಯಾಧ್ಯಕ್ಷ ಎಲ್.ಕೃಷ್ಣ ಮಾತನಾಡಿ, ರಾಜ್ಯದ ರಾಜಕೀಯ ಮುಖಂಡರು ಈ ಸಂಬಂಧ ಗಮನ ಹರಿಸಿ ಸದರಿ ಎಫ್‌ಐಆರ್ ಹಿಂತೆಗೆಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಈ ರೀತಿ ಸ್ವಾಮೀಜಿಗಳ ಮೇಲೆ ತನಿಖೆಯಾದರೆ ಒಕ್ಕಲಿಗ ಸಮಾಜಕ್ಕೆ ಕಳಂಕವಾಗಲಿದೆ. ಸರ್ಕಾರ ಸ್ವಾಮೀಜಿಗಳ ವಿರುದ್ಧ ವಿಚಾರಣೆಯನ್ನು ರದ್ದು ಮಾಡಬೇಕೆಂದು ಮನವಿ ಮಾಡಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಮಾತನಾಡಿ, ಸ್ವಾಮೀಜಿಗಳು ಮಾತನಾಡುವ ವೇಳೆ ಉದ್ವೇಗದಿಂದ ಲೋಪವಾಗಿದೆ. ಸ್ವಾಮೀಜಿಗಳು ಕ್ಷಮೆಯಾಚನೆ ಮಾಡಿದ್ದು, ಇದನ್ನು ಮುಂದುವರೆಸದೇ ಸದರಿ ಪ್ರಕರಣದಿಂದ ಸ್ವಾಮೀಜಿಯವರನ್ನು ಖುಲಾಸೆ ಮಾಡಬೇಕು ಎಂದು ಕೋರಿದರು.

ಗೋಷ್ಠಿಯಲ್ಲಿ ಟ್ರಸ್ಟ್‌ನ ರಾಜ್ಯ ಉಪಾಧ್ಯಕ್ಷ ಕೃಷ್ಣೇಗೌಡ, ಚಂದ್ರಶೇಖರ್ ಇದ್ದರು.

Tags:
error: Content is protected !!