Mysore
28
few clouds

Social Media

ಶನಿವಾರ, 14 ಮಾರ್ಚ್ 2026
Light
Dark

ಮದ್ದೂರು | ಕಲ್ಲು ತೂರಿದ ಮುಲ್ಲಾಗಳನ್ನೂ ಕೂಡಲೇ ಬಂಧಿಸಿ : ಪ್ರತಾಪ ಸಿಂಹ ಆಗ್ರಹ

ಮಂಡ್ಯ : ಮದ್ದೂರಿನಲ್ಲಿ ಭಾನುವಾರ ಸಂಜೆ ಗಣಪತಿ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್‌ ಸಿಂಹ ಅವರು ಸಮಾಧಾನದಿಂದ ಹೋರಾಟ ಮಾಡುವಂತೆ ಹಿಂದೂ ಕಾರ್ಯಕರ್ತರಿಗೆ ಮನವಿ ಮಾಡಿದ್ದಾರೆ.

ಹೋರಾಟಗಾರರನ್ನ ಉದ್ದೇಶಿಸಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹ, ಹೋರಾಟದಲ್ಲಿ ಬೆಂಬಲವಾಗಿ ನಿಂತಿರುವ ಜೆಡಿಎಸ್ ಮುಖಂಡರು, ನಿಖಿಲ್ ಕುಮಾರಸ್ವಾಮಿ, ಎಚ್‌ಡಿ ಕುಮಾರಸ್ವಾಮಿಗೆ ಹಾಗೂ ಪಕ್ಷಾತೀತವಾಗಿ ಬಂದಿರುವ ಕಾಂಗ್ರೆಸ್ ಕಾರ್ಯಕರ್ತರೇ ಎಂದು ಭಾಷಣದಲ್ಲಿ ಉಲ್ಲೇಖಿಸಿದರು.

ಸಿದ್ದರಾಮಯ್ಯ ಮೊದಲ ಬಾರಿ ಸಿಎಂ ಆದಾಗ ಚಾಮುಂಡಿಗೆ ಅವಮಾನ ಮಾಡಿದ್ರು, ಮಹಿಷ ದಸರಾ ಮಾಡಲು ಮುಂದಾಗಿದ್ರು ಅದನ್ನ ಮೆಟ್ಟಿ ನಿಂತಿದ್ದೇವೆ. ಇದೇ ರೀತಿ ಇಲ್ಲೂ ಹೋರಾಟಗಳು ಆಗಬೇಕು ಎಂದು ಭಾಷಣದ ವೇಳೆ ಹೋರಾಟಗಾರರನ್ನು ಆಗ್ರಹ ಮಾಡಿದರು.

ಇದನ್ನು ಓದಿ: ಧರ್ಮಸ್ಥಳ, ಚಾಮುಂಡೇಶ್ವರಿ ಆಯ್ತು ಈಗ ಮದ್ದೂರು ಸರದಿ: ಪ್ರತಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿ

ಇದೇ ವೇಳೆ, ಕರ್ನಾಟಕಕ್ಕೆ ಯೋಗಿ ಆದಿತ್ಯನಾಥ್ ಕರೆಸುವಂತೆ ಒತ್ತಾಯ ಮಾಡಿದ ಪ್ರತಾಪ್ ಸಿಂಹ, ಚುನಾವಣೆ ಸಂದರ್ಭ ಉದಯ್ ಕಾಸಿಗೆ ಓಟ್ ಹಾಕಿಬಿಡ್ತಿರಿ, ಜೂಜಾಡಿಸೋರಿಗೆ ಓಟ್ ಹಾಕಿ ಯೋಗಿ ಆದಿತ್ಯನಾಥ್ ಬೇಕು ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು.

ಈ ಹಿಂದೆ ನಾನು ಹೇಳಿದ್ದೆ ಕಾಂಗ್ರೆಸ್ ಗೆ ಓಟ್ ಹಾಕಿದ್ರೆ ಕನ್ನಡದ ಸರ್ಕಾರ ಅಲ್ಲಾ ತಾಲಿಬಾನ್ ಸರ್ಕಾರ ನಿರ್ಮಾಣ ಆಗತ್ತೆ ಅಂತ. ಮುಸ್ಲಿಮರು ಎಂದೂ ಶಾಂತಿಯಿಂದ ಇಲ್ಲ, ಇಲ್ಲಿ ಅನ್ನ ತಿಂದು ಗಡಿ ಆಚೆಗಿನ ನಿಷ್ಠೆ ತೋರಿಸ್ತಾರೆ ಎಂದು ಕಿಡಿಕಾರಿದರು.

ಮಸೀದಿಯ ಒಳಗೆ ಕಲ್ಲು ಹೇಗೆ ಬಂತು? ಕಲ್ಲು ತಂದ ಮುಲ್ಲಾ ಯಾರು? ಎಂದು ಪ್ರಶ್ನಿಸಿದ ಪ್ರತಾಪ್ ಸಿಂಹ, ಅದರ ಬಗ್ಗೆ ತನಿಖೆ ಆಗಬೇಕು. ಹೆಣ್ಣು ಮಕ್ಕಳ ಮೇಲೆ ಲಾಠಿ ಪ್ರಹಾರ ಮಾಡಿದವರ ವಿರುದ್ದ ಕ್ರಮ ಆಗಬೇಕು. ನಮ್ಮ ಹುಡುಗ್ರು ಯಾರೂ ಕಲ್ಲು ಹೊಡೆಯುವ ಸಂಸ್ಕೃತಿ ಇಲ್ಲ, ಆ ಮಸೀದಿಯ ಮುಲ್ಲನನ್ನ ಅರೆಸ್ಟ್ ಮಾಡಬೇಕು. ಮಸೀದಿ ಸೀಜ್ ಮಾಡಬೇಕು. ಮಸೀದಿ ಮುಚ್ಚಿಸುವ ಭರವಸೆ ಕೊಟ್ರೆ ಪ್ರತಿಭಟನೆ ಕೈಬಿಡ್ತೀವಿ ಎಂದು ಹೇಳಿದರು.

Tags:
error: Content is protected !!