Mysore
30
clear sky

Social Media

ಸೋಮವಾರ, 08 ಡಿಸೆಂಬರ್ 2025
Light
Dark

ನಿರುದ್ಯೋಗ ಯುವಕರನ್ನು ಕೃಷಿಯತ್ತ ಸೆಳೆಯಲು ಪ್ಲಾನ್‌: ಮಂಡ್ಯದಲ್ಲಿ ರೈತರ ಶಾಲೆ ಆರಂಭಕ್ಕೆ ಚಿಂತನೆ

ಮಂಡ್ಯ: ನಿರುದ್ಯೋಗ ಯುವಕರನ್ನು ಕೃಷಿಯತ್ತ ಸೆಳೆಯಲು ಬಿಗ್‌ ಪ್ಲಾನ್‌ ರೂಪಿಸಲಾಗಿದ್ದು, ದೇಶದಲ್ಲಿ ಮೊದಲ ಬಾರಿಗೆ ಸಕ್ಕರೆ ನಾಡು ಮಂಡ್ಯದಲ್ಲಿ ರೈತರ ಶಾಲೆ ಆರಂಭಿಸಲು ಚಿಂತನೆ ನಡೆಸಲಾಗಿದೆ.

ಮಂಡ್ಯ ತಾಲ್ಲೂಕಿನ ಆಲಕೆರೆ ಗ್ರಾಮದಲ್ಲಿ ರೈತರ ಶಾಲೆ ಆರಂಭಿಸಲು ಈಗಾಗಲೇ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ.

ಮುಂದಿನ ಒಂದೂವರೆ ತಿಂಗಳಲ್ಲಿ ಶಾಲೆ ತಲೆ ಎತ್ತಲಿದ್ದು, ಇದರಿಂದ ಅನ್ನದಾತರಿಗೆ ತುಂಬಾ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.

ಇನ್ನು ಮೈಸೂರು ಮಹಾರಾಣಿ ಕಾಲೇಜಿನ ನಿರ್ವಹಣಾ ವಿಭಾಗದ ಉಪನ್ಯಾಸನ ಶ್ರೀರಂಗಪಟ್ಟಣದ ಗಂಜಾಂನ ಸತ್ಯಮೂರ್ತಿ ಹಾಗೂ ಅವರ ತಂಡ ರೈತರ ಶಾಲೆ ಆರಂಭಕ್ಕೆ ಮುನ್ನುಡಿ ಬರೆದಿದ್ದಾರೆ.

ಈ ಮೂಲಕ ನಿರುದ್ಯೋಗಿ ಹಾಗೂ ವಿದ್ಯಾವಂತ ಯುವಕರನ್ನು ಕೃಷಿಯತ್ತ ಸೆಳೆಯಲು ಈ ಪ್ಲಾನ್‌ ಮಾಡಲಾಗಿದೆ.

Tags:
error: Content is protected !!