ಮಂಡ್ಯ: ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಡ್ಯಾಂಗೆ ಶುಕ್ರವಾರ(ಆ.9) ಉಪ ಮುಖ್ಯಮುಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿದರು.

ಈ ವೇಳೆ ಕಾವೇರಿ ಅಮ್ಯೂಸ್ಮೆಂಡ್ ಪಾರ್ಕ್ ನಿಮಾಣ ಬಗ್ಗೆ ಪರಿಶೀಲಿಸಿ, ಡ್ಯಾಂ ಮೇಲೆ ಎಲೆಕ್ಟ್ರಿಕ್ ವಾಹನದಲ್ಲಿ ಸಂಚರಿಸಿ ಪರಿಶೀಲನೆ ನಡೆಸಿದರು.

ನೃತ್ಯ ಕಾರಂಜಿ ಹಾಗೂ ಬೃಂದಾವನ ಗಾರ್ಡನ್ ಸೇರಿ ಹಲವೆಡೆ ಪರಿಶೀಲಿಸಿದ ಅವರು, ಅಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆಗಳನ್ನು ನೀಡಿದರು. ಈ ವೇಳೆ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಶಾಸಕ ರವಿಕುಮಾರ್ ಗಣಿಗ, ಎಂಎಲ್ಸಿ ದಿನೇಶ್ ಗೂಳಿಗೌಡ ಹಾಗೂ ಡಿಸಿ ಕುಮಾರ್ ಸಾಥ್ ನೀಡಿದರು.





