Mysore
23
broken clouds
Light
Dark

ಆಂದೋಲನ ದಿನಪತ್ರಿಕೆಯ 52ನೇ ವಾರ್ಷಿಕೋತ್ಸವಕ್ಕೆ ಶುಭಕೋರಿದ ಕೃಷಿ ಸಚಿವ ಚಲುವರಾಯಸ್ವಾಮಿ

ಮಂಡ್ಯ: ಆಂದೋಲನ ದಿನಪತ್ರಿಕೆಗೆ 52ರ ವಾರ್ಷಿಕೋತ್ಸವಕ್ಕೆ ಮನೆಮಾಡಿದ್ದು, ಗಣ್ಯಾತಿಗಣ್ಯರು ವಿವಿಧ ರೀತಿಯಲ್ಲಿ ಶುಭ ಕೋರಿದ್ದಾರೆ.

ಈ ಹಿನ್ನೆಲೆಯಲ್ಲಿ ಕೃಷಿ ಸಚಲುವ ಚಲುವರಾಯಸ್ವಾಮಿ ಅವರು ಕೂಡ ಆಂದೋಲನ ದಿನಪತ್ರಿಕೆಗೆ ಶುಭ ಕೋರಿದ್ದು, ಮಂಡ್ಯ ಜಿಲ್ಲೆ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಆಂದೋಲನ ಪತ್ರಿಕೆಯ ವಿಶೇಷ ಸಂಚಿಕೆ ಸಾರ್ಥಕ ಪಯಣ ಪ್ರತಿಯನ್ನು ಅನಾವರಣ ಮಾಡುವ ಮೂಲಕ ಆಂದೋಲನ ದಿನಪತ್ರಿಕೆಗೆ ಶುಭ ಕೋರಿದರು. ಈ ಬಗ್ಗೆ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಆಂದೋಲನ ದಿನಪತ್ರಿಕೆ ನಡೆದು ಬಂದ ಹಾದಿಯ ಬಗ್ಗೆ ಎಲ್ಲರೊಂದಿಗೆ ಖುಷಿ ಹಂಚಿಕೊಂಡಿದ್ದಾರೆ.

ಈ ಮೂಲಕ ಗಣ್ಯಾತಿಗಣ್ಯರು ಆಂದೋಲನ ದಿನಪತ್ರಿಕೆಯ 52ನೇ ವಾರ್ಷಿಕೋತ್ಸವಕ್ಕೆ ಶುಭಕೋರುತ್ತಿದ್ದು, ಆಂದೋಲನ ಇನ್ನೂ ಹೆಚ್ಚಿನ ಯಶಸ್ಸು ಪಡೆಯಲಿ ಎಂದು ಶುಭ ಹಾರೈಸುತ್ತಿದ್ದಾರೆ.