Mysore
23
broken clouds
Light
Dark

87 ನೇ ಅಖಿಲ ಭಾರತ ಸಮ್ಮೇಳನ: ವಿಶೇಷ ಸಾಧನೆಗೈದ ಕನ್ನಡಿಗರು ಮಾಹಿತಿ ಸಲ್ಲಿಸಿ

ಮಂಡ್ಯ: ನಗರದಲ್ಲಿ ಡಿಸಂಬರ್  20 ರಿಂದ 22 ರವರೆಗೆ 3 ದಿನಗಳ ಕಾಲ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಚರಿಸಲಾಗುತ್ತಿರುತ್ತದೆ.

ಸಮ್ಮೇಳನಕ್ಕೆ ಮಂಡ್ಯ ಜಿಲ್ಲೆಯಿಂದ ಹೊರ ರಾಜ್ಯ ಮತ್ತು ಹೊರ ರಾಷ್ಟ್ರಗಳಲ್ಲಿ ನೆಲೆಸಿರುವ ಹಾಗೂ ವೈದ್ಯಕೀಯ, ಕ್ರೀಡೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿ, ವಿಜ್ಞಾನ, ಇಂಜಿನಿಯರಿಂಗ್, ನ್ಯಾಯಾಂಗ, ಸಂಶೋಧನೆ, ಸೇನೆ, ಶಿಕ್ಷಣ, ಆರೋಗ್ಯ ಅಡಳಿತ ಹಾಗೂ ಇತರೆ ಪ್ರಮುಖ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿರುವ ಕನ್ನಡಿಗರನ್ನು ಸಮ್ಮೇಳನಕ್ಕೆ ಆಹ್ವಾನಿಸಲಾಗುವುದು.

ಆದ್ದರಿಂದ, ಸದರಿಯವರ ವಿವರವನ್ನು ಆಗಸ್ಟ್ 23 ರೊಳಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ರಾಜಸ್ವ ನಿರೀಕ್ಷಕರು, ಗ್ರಾಮ ಆಡಳಿತ ಅಧಿಕಾರಿಗಳಿಂದ ಪಡೆದು ಧೃಡೀಕರಿಸಿ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸುವುದು ಎಂದು ಜಿಲ್ಲಾಧಿಕಾರಿ ಮತ್ತು 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – 2024 ರ ಪ್ರಧಾನ ಸಂಚಾಲಕರು ಹಾಗೂ ಕೋಶಾಧ್ಯಕ್ಷರಾದ ಡಾ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.