ಮೈಸೂರು : ಮೈಸೂರು ಲಾರಿ ಮತ್ತು ಟಿಪ್ಪರ್ ಚಾಲಕರ ಕ್ಷೇಮಾಭಿವೃದ್ಧಿ ಸಂಘ (ರಿ.) ದವರ ಸಹಕಾರದ ಮೇರೆಗೆ ನಗರ ವರ್ತುಲ ರಸ್ತೆ, ಯರಗನಹಳ್ಳಿ ವ್ಯಾಪ್ತಿಯ ಮೆಟ್ರೋ ಎಂ-ಸ್ಯಾಂಡ್ ಘಟಕದಲ್ಲಿ ಅಕ್ರಮವಾಗಿ ಎಂ-ಸ್ಯಾಂಡ್, ಜೆಲ್ಲಿ ದಾಸ್ತಾನು ಮಾಡುತ್ತಿದ್ದ ಪ್ರದೇಶಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಅಕ್ರಮವಾಗಿ ದಾಸ್ತಾನು ಮಾಡುತ್ತಿದ್ದ ಎಂ-ಸ್ಯಾಂಡ್, ಜೆಲ್ಲಿ ಉಪಖನಿಜವನ್ನು ವಶಪಡಿಸಿಕೊಂಡಿದ್ದಾರೆ.
ದಾಳಿಯ ಸಮಯದಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ರಶ್ಮಿ, ಭೂ ವಿಜ್ಞಾನಿಗಳಾದ ರಾಮಲಿಂಗಯ್ಯ, ಅಮೃತ, ಗಿರೀಶ್, ಜೀವನ್ ಹಾಗೂ ನಂದೀಶ್ ಹಾಜರಿದ್ದರು..





