ಮೈಸೂರು: ಮೈಸೂರು ದಸರಾದಲ್ಲಿ ಸತತ ೮ ಬಾರಿ ಅಂಬಾರಿಹೊತ್ತ ಆನೆ ಸಾವನ್ನಪ್ಪಿರುವುದು ಅಘಾತಕಾರಿ. ಈ ಬಗ್ಗೆ ಅನೇಕ ಊಹಾ ಪೋಹಗಳು ಹುಟ್ಟಿಕೊಂಡಿದ್ದು, ಈ ಬಗ್ಗೆ ಸರ್ಕಾರ ಉನ್ನತಮಟ್ಟದ ತನಿಖೆ ಮಾಡಬೇಕು ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಅರ್ಜುನನ ಸಾವಿನಿಂದ ಲಕ್ಷಾಂತರ ಜನರ ಮನಸ್ಸಿಗೆ ನೋವಾಗಿದೆ. ಕಾಡಾನೆ ದಾಳಿಯಿಂದ ಸಾವನ್ನಪ್ಪಿರುವ ಅರ್ಜುನನ ಸಾವಿಗೆ ನಿಜವಾದ ಕಾರಣ ಭಯಲಾಗಬೇಕು. ಸರ್ಕಾರ ಈ ಬಗ್ಗೆ ತನಿಖೆ ನಡೆಸಿ ಅರ್ಜುನನ ಸಾವಿಗೆ ಕಾರಣ ಯಾರು ಎಂಬುದು ತಿಳಿಸಬೇಕು ಎಂದಿದ್ದಾರೆ.
ಇಲ್ಲವಾದಲ್ಲಿ ಕನ್ನಡ ಚಳುವಳಿ ವಾಟಾಳ್ ಪಕ್ಷ ತೀವ್ರ ಹೋರಾಟ ನಡೆಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.





