ಗುಂಡ್ಲುಪೇಟೆ : ತಾಲ್ಲೂಕಿನ ಬೇಗೂರು ಸಮೀಪದ ಕೋಟೆಕೆರೆ ಗ್ರಾಮದ ಬಿಳಿಗಿರಿನಾಯಕ ಎಂಬುವವರ ಜಮೀನಿನಲ್ಲಿ ವಿನ್ ಸೀಡ್ ಅಗ್ರಿ ಪ್ರೈವೇಟ್ ಲಿಮಿಟೆಡ್ ಕಂಪೆನಿಯ ವತಿಯಿಂದ ಹೈಬ್ರೀಡ್ ಟೀನಾ ತಳಿಯ ಟೊಮೆಟೊ ಬೆಳೆ ಕ್ಷೇತ್ರೋತ್ಸವ ನಡೆಯಿತು.
ಈ ಸಂದರ್ಭದಲ್ಲಿ ಬೇಗೂರು ಗ್ರಾಪಂ ಸದಸ್ಯ ಹಾಗೂ ಮಲೆಮಹದೇಶ್ವರ ನರ್ಸರಿ ಮಾಲೀಕ ಸೋಮಶೇಖರ್. ಜನರಲ್ ಮ್ಯಾನೇಜರ್ ಪಾಂಡುಪಟೇಲ್, ಕ್ಷೇತ್ರ ಮಾರಾಟ ವ್ಯವಸ್ಥಾಪಕ ಸುಂದರ್, ಮಾರಾಟ ವ್ಯವಸ್ಥಾಪಕ ಶಿವಕುಮಾರ್, ಮೈಸೂರು ವಿಭಾಗದ ವಿತರಕರಾದ ವಸಂತಕುಮಾರ್, ಚಾಮರಾಜನಗರ ವಿತರಕ ರವಿಕುಮಾರ್, ರೈತರಾದ ಬಿಳಿಗಿರಿನಾಯಕ , ಶಂಕರ್ನಾಯಕ, ರಾಜನಾಯಕ, ಮಹೇಶ್, ರೈತಮುಖಂಡರು ಹಾಜರಿದ್ದರು.




