Mysore
34
clear sky

Social Media

ಶುಕ್ರವಾರ, 14 ಮಾರ್ಚ್ 2025
Light
Dark

ಕೊಡಗು| ಅಂಗಡಿ ಮುಂದೆ ಮಲಗಿದ್ದ ವ್ಯಕ್ತಿ ಸಾವು

ಸುಂಟಿಕೊಪ್ಪ: ಅಂಗಡಿಯ ಮುಂದೆ ಮಲಗಿದ್ದ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪದಲ್ಲಿ ನಡೆದಿದೆ.

ಅಪ್ಪಾರಂಡ ಬಡಾವಣೆಯಲ್ಲಿ ವಾಸವಾಗಿದ್ದ ಕಾರ್ಮಿಕ ವಿನೋದ್ ಎಂಬಾತ ಕಳೆದ ತಡರಾತ್ರಿ ಬಸ್ ನಿಲ್ದಾಣ ಸಮೀಪವಿರುವ ಅಂಗಡಿ ಮುಂಭಾಗದಲ್ಲಿ ಮಲಗಿದ್ದು, ಇಂದು ಬೆಳಿಗ್ಗೆ ಅಂಗಡಿಯವರು ಬಾಗಿಲು ತೆರೆದು ನೋಡಿದಾಗ ವಿನೋದ್ ಮೃತಪಟ್ಟಿರುವುದು ಕಂಡುಬಂದಿದೆ.

ವಿನೋದ್ ಅವರು ವಿಪರೀತ ಚಳಿಗೆ ಮೃತಪಟ್ಟಿದ್ದಾರೆಯೇ ಅಥವಾ ಹೃದಯಾಘಾತವಾಗಿದೆಯೇ ಎಂಬುದು ಮರಣೋತ್ತರ ಪರೀಕ್ಷೆಯಿಂದ ತಿಳಿದುಬರಬೇಕಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಡಿಕೇರಿ ಆಸ್ಪತ್ರೆಗೆ ರವಾನಿಸಲಾಗಿದೆ‌.

Tags: