ಮಡಿಕೇರಿ: ಕೊಡಗಿಯ ಪೊನ್ನಂಪೇಟೆ ಅರಣ್ಯ ಇಲಾಖೆ ವ್ಯಾಪ್ತಿಯ ಕಳತ್ಮಾಡು ಗ್ರಾಮದ ಅಡಿಕೆ ತೋಟದಲ್ಲಿ ಕಾಡಾನೆಯೊಂದು ಶವವಾಗಿ ಪತ್ತೆಯಾಗಿದೆ.
ಗ್ರಾಮದ ಜಾಸ್ಮಿನ್ ಎಂಬುವವರ ಅಡಿಕೆ ಗದ್ದೆಯಲ್ಲಿ ಆನೆಯ ಶವ ಪತ್ತೆಯಾಗಿದೆ. ಸ್ಥಳಕ್ಕೆ ಎ.ಸಿ.ಎಫ್ ಗೋಪಾಲ್, ಪೊನ್ನಂಪೇಟೆ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಇನ್ನೂ ನಿಖರ ಕಾರಣ ತಿಳಿದು ಬಂದಿಲ್ಲ. ಆನೆಗೆ ಯಾವುದೇ ರೀತಿಯ ಗಾಯಗಳು ಉಂಟಾಗಿರುವುದು ಸಹ ಕಂಡುಬಂದಿಲ್ಲ.





