Mysore
26
clear sky

Social Media

ಶುಕ್ರವಾರ, 27 ಮಾರ್ಚ್ 2026
Light
Dark

ಹನಿಟ್ರ್ಯಾಪ್‌ ಆಗಿದ್ದರೆ ದೂರು ನೀಡಲಿ: ಡಿಕೆಶಿ

ಮಡಿಕೇರಿ: ಅವರ ಮೇಲೆ ಹನಿಟ್ರ್ಯಾಪ್‌ ಆಗಿದ್ದರೆ ಪೊಲೀಸ್‌ ಠಾಣೆಯಲ್ಲಿ ದೂರು ನೀಡಲಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕೊಡಗಿನ ಭಾಗಮಂಡಲದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅವರು ಮಾಡಿದ್ದು ಅವರಿಗೆ. ಹನಿಟ್ರ್ಯಾಪ್‌ ಮಾಡುವುದಲ್ಲ, ಆಗಿರುವುದು. ಅವರಿಗೆ ಏನಾದರೂ ಅಗಿದ್ದರೆ ದೂರು ನೀಡಲಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಮುನಿರತ್ನ ಅರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಸುಮ್ಮನೇ ಯಾರಾದರೂ ನಿಮ್ಮ ಹತ್ತಿರಕ್ಕೆ ಬರುತ್ತಾರಾ? ನೀವು ಹಾಯ್‌ ಅಂದ್ರೆ ಅವರು ಹಾಯ್‌ ಅಂತಾರೆ. ಅಧಿವೇಶನದಲ್ಲಿ ಅವರು ಏನು ಮಾಡಿದ್ದಾರೆ ಎನ್ನುವುದು ದೂರಿನಲ್ಲಿ ಇದೆ ಎಂದು ತಿರುಗೇಟು ನೀಡಿದರು.

 

Tags:
error: Content is protected !!