ಮಡಿಕೇರಿ: ವಿರಾಜಪೇಟೆ ತಾಲೂಕಿನ ಚಂಬೆಬೆಳ್ಳೂರಿನ ಪುದುಕೋಟೆ ಗ್ರಾಮದ ಬಳಿ ಗುರುವಾರ ಹುಲಿ ದಾಳಿಗೆ ಹಸು ಬಲಿಯಾಗಿದೆ.
ಗ್ರಾಮದ ಕೊಳವಂಡ ಹರೀಶ್ ಈರಪ್ಪ ಎಂಬವರಿಗೆ ಸೇರಿದ ಹಸು ಇಂದು ಮಧ್ಯಾಹ್ನ 3:30 ಗಂಟೆಗೆ ತೋಟದ ಪಕ್ಕದಲ್ಲಿ ಮೇಯಲು ಬಿಟ್ಟಿದ್ದ ಸಂದರ್ಭದಲ್ಲಿ ಹುಲಿಗೆ ದಾಳಿಗೆ ಹಸುನೀಗಿದೆ.
ಕಳೆದ ಒಂದು ತಿಂಗಳ ಹಿಂದೆ ಇದೇ ಹಸುವಿನ ಕರುವನ್ನು ಹುಲಿ ಕೊಂದು ಹಾಕಿತ್ತು. ಅಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿಯನ್ನು ಹಿಡಿಯಲು ಪ್ರಯತ್ನಿಸಿದ್ದರು. ಆದರೆ ಇಂದು ಮತ್ತೆ ಪುನಃ ಒಂದು ತಿಂಗಳ ನಂತರ ಹುಲಿ ಗ್ರಾಮದಲ್ಲಿ ಪ್ರತ್ಯಕ್ಷವಾಗಿ ಹಸುವನ್ನು ಬಲಿ ತೆಗೆದುಕೊಂಡಿದೆ. ಇದೀಗ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ, ಪರೀಶಿಲನೆ ನಡೆಸಿ, ಹುಲಿ ಕಾರ್ಯಚರಣೆಗೆ