ಬೇಗೂರು (ಗುಂಡ್ಲುಪೇಟೆ) : ಸಮೀಪದ ನಿಟ್ರೆ ಗ್ರಾಮದಲ್ಲಿ ಅಲ್ಲಹಳ್ಳಿ ಮಾರಮ್ಮನ ಜಾತ್ರೆ ಎರಡು ದಿನಗಳ ಕಾಲ ನಡೆಯಲಿದೆ.
ಜಾತ್ರೆ ನಡೆಯುವ ಹಿಂದಿನ ದಿನ ಸೆ 19.ರ ಸೋಮವಾರ ಗ್ರಾಮದ ಪಾರ್ವತಾಂಬೆ ದೇವಾಲಯದ ಆವರಣದಲ್ಲಿ ಒಟ್ಟಾಗಿ ಸೇರಿದ ಗ್ರಾಮಸ್ಥರು ಅದ್ದೂರಿ ವಾದ್ಯ ಮೇಳ ದೊಂದಿಗೆ ಗ್ರಾಮದ ಬಸರಿ ಮರದ ಆವರಣದಲ್ಲಿ ಪಾರ್ವತಾಂಬೆಯ ಮೂರ್ತಿಗೆ ಪೂಜೆ ಸಲ್ಲಿಸಿ ನಂತರ ವಾದ್ಯ ಮೇಳದೊಂದಿಗೆ ದೇಶಿಪುರದ ಅರಣ್ಯ ಪ್ರದೇಶದಲ್ಲಿರುವ ಮೂಲ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಮಂಗಳವಾರ ಬೆಳಗ್ಗೆ ವಾದ್ಯ ಮೇಳದೊಂದಿಗೆ ತೀರ್ಥ ಪ್ರಸಾದ ತಂದ ನಂತರ ಹರಕೆ ಹೊತ್ತ ವರು ಬಾಯಿ ಬೀಗ ಮೆರವಣಿಗೆ ವಾದ್ಯ ಮೇಳದೊಂದಿಗೆ ನಡೆಯುತ್ತದೆ ನಂತರ ರಥವನ್ನು ಸಿಂಗರಿಸಿ ವಾದ್ಯ ಮೇಳ ದೊಂದಿಗೆ ಜಾತ್ರೆಗೆ ಚಾಲನೆ ದೊರೆಯಲಿದೆ.