ಮೈಸೂರು : ದಕ್ಷಿಣ ಕನ್ನಡ ಜಿಲ್ಲೆಯ ಡಿಸಿಯಾಗಿದ್ದ ರಾಜೇಂದ್ರ ಅವರನ್ನು ಮೈಸೂರು ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಈ ಹಿಂದೆ ಇದ್ದಂತಹ ಡಿಸಿ ಡಾ. ಬಗಾದಿ ಗೌತಮ್ ಅವರನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿರ್ದೇಶಕರಾಗಿ ಬೆಂಗಳೂರಿಗೆ ವರ್ಗಾವಣೆ ಮಾಡಲಾಗಿದೆ.

ಆಂದೋಲನದೊಟ್ಟಿಗೆ ಮಾತನಾಡಿದ ಬಗಾದಿ ಗೌತಮ್ ಅವರು ಮೈಸೂರಿನಲ್ಲಿ ಡಿಸಿಯಾಗಿ ಕೆಲಸ ಮಾಡಿದ ಅನುಭವ ಭಿನ್ನವಾಗಿತ್ತು. 17 ತಿಂಗಳಿನಲ್ಲಿ ದಸರಾ ಉತ್ಸವ ಸೇರಿ ಹಲವು ಸವಾಲು ಎದುರಿಸಿ ಕೆಲಸ ಮಾಡಿದ ಅನುಭವವಾಯಿತು. ಒಳ್ಳೆಯ ನೆನಪುಗಳೊಂದಿಗೆ ಬೆಂಗಳೂರಿಗೆ ಹೋಗುತ್ತಿದ್ದೇನೆ ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.





