ಮೈಸೂರು: ವಿಶ್ವ ಹಿಂದೂ ಪರಿಷತ್ ವತಿಯಿಂದ ಹಾಡಿ ವಾಸಿಗಳಿಗೆ ಅಗತ್ಯ ವಸ್ತುಗಳನ್ನು ಒದಗಿಸುವ ಉದ್ದೇಶದಿಂದ ಅಗತ್ಯ ವಸ್ತುಗಳ ಸಂಗ್ರಹಣಾ ಅಭಿಯಾನ ಆರಂಭವಾಗಿದೆ. ಆಸಕ್ತರು ತಮ್ಮಲಿರುವ ಉತ್ತಮವಾಗಿದ್ದೂ ಬಳಸದ ಬಟ್ಟೆಗಳು, ಪಾತ್ರೆಗಳು, ಆಟಿಕೆಗಳು, ಪುಸ್ತಕಗಳು ಸೇರಿದಂತೆ ದಿನನಿತ್ಯ ಬಳಸುವ ವಸ್ತುಗಳನ್ನು ನೀಡಬಹುದಾಗಿದೆ. ಈ ವಸ್ತುಗಳು ಮೈಸೂರು ಭಾಗದ 300 ಹಾಡಿಗಳ ವಾಸಿಗಳಿಗೆ ತಲುಪಿಸಲಾಗುವುದು. ಆಸಕ್ತರು ವಸ್ತುಗಳನ್ನು ಬೋಗಾದಿಯಲ್ಲಿರುವ ಸೇಫ್ ವೀಲ್ಹ್ ಪಾರ್ಕಿಂಗ್ಗೆ ತಲುಪಿಸಬಹುದು. ಹೆಚ್ಚಿನ ಮಾಹಿತಿಗೆ ದೂ.ಸಂಖ್ಯೆ 0821-3550692.