ಕೊಳ್ಳೇಗಾಲ: ಭರಚುಕ್ಕಿ ಜಲಪಾತ ವೀಕ್ಷಿಸುತ್ತಿದ್ದ ಓರ್ವ ಯುವಕ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಘಟನೆ ವಿವರ ;
ಬೆಂಗಳೂರಿನಿಂದ ಆಟೋದಲ್ಲಿ ಆರು ಮಂದಿ ಸ್ನೇಹಿತರು ಮಹದೇಶ್ವರಬೆಟ್ಟದಲ್ಲಿ ಯಾತ್ರೆ ಮುಗಿಸಿ ವಾಪಸ್ ಹಿಂದಿರುಗಿ, ಭರಚುಕ್ಕಿ ಜಲಪಾತ ವೀಕ್ಷಿಸುತ್ತಿದ್ದರು. ಈ ಪೈಕಿ ಪ್ರೇಮ್ ಕುಮಾರ್(೨೦) ಎಂಬಾತ ನದಿಯಲ್ಲಿ ಮುಳುಗಿದ್ದಾನೆ.
ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶವವನ್ನು ನದಿಯಿಂದ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಹಸ್ತಾಂತರಿಸಲಾಯಿತು.



