Mysore
33
few clouds

Social Media

ಸೋಮವಾರ, 23 ಮಾರ್ಚ್ 2026
Light
Dark

ಜಮೀನಿಗೆ ಕಾಡಾನೆ ಹಿಂಡು ಲಗ್ಗೆ, ಫಸಲು ನಾಶ

ಹನೂರು: ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಸಾಲೂರು ಮಠದ ಸಮೀಪದ ಜಮೀನಿಗೆ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು, ಜೇನುಪೆಟ್ಟಿಗೆ, ತೆಂಗಿನ ಫಸಲು ನಾಶ ಮಾಡಿದೆ.

ಹನೂರು ತಾಲ್ಲೂಕಿನ ರಾಮಾಪುರ ಹೋಬಳಿ ವ್ಯಾಪ್ತಿಯ ಮಹದೇಶ್ವರ ಬೆಟ್ಟದ ಸರ್ವೆ ನಂ.೧೨೪ರಲ್ಲಿ ಮಾದತಂಬಡಿ ಎಂಬವರಿಗೆ ಸೇರಿದ ಜಮೀನಿಗೆ ಸಮೀಪದ ಅರಣ್ಯ ಪ್ರದೇಶದಿಂದ ಕಾಡಾನೆಗಳ ಹಿಂಡು ನುಗ್ಗಿದ್ದು ಜಮೀನಿನಲ್ಲಿ ಬೆಳೆಯಲಾಗಿದ್ದ ಹಲಸಿನಹಣ್ಣು, ತೆಂಗಿನ ಗಿಡಗಳನ್ನು ತುಳಿದು ನಾಶಪಡಿಸಿವೆ. ಜೊತೆಗೆ ಜಮೀನಿನಲ್ಲಿಟ್ಟಿದ್ದ ಜೇನು ಪೆಟ್ಟಿಗೆಯನ್ನು ನಾಶಗೊಳಿಸಿವೆ. ಇದರಿಂದ ಲಕ್ಷಾಂತರ ರೂ. ನಷ್ಟವಾಗಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕ್ರಮವಹಿಸಿ ಸೂಕ್ತ ಪರಿಹಾರ ನೀಡುವಂತೆ ನೊಂದ ರೈತ ಆಗ್ರಹಿಸಿದ್ದಾನೆ.

Tags:
error: Content is protected !!