ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು
ಗುಂಡ್ಲುಪೇಟೆ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಡೆದಾಡುವ ದೇವರು ತ್ರಿವಿಧ ದಾಸೋಹಿ, ಸಿದ್ದಗಂಗಾ ಮಠದ ಲಿಂಗೈಕ್ಯ ಶ್ರೀ ಶ್ರೀ ಶಿವಕುಮಾರ ಸ್ವಾಮಿ ಅವರ 119 ನೇ ವರ್ಷದ ಜಯಂತಿ ಮಹೋತ್ಸವವನ್ನು ವೀರಶೈವ ಮಹಾಸಭೆ ಯುವಘಟಕ, ಸಮುದಾಯದ ಹಿರಿಯರು ಕಿರಿಯರ ಸಹಯೋಗದಲ್ಲಿ ಶ್ರೀಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆಚರಿಸಲಾಯಿತು.
ಸಮಾಜದ ಎಲ್ಲಾ ವರ್ಗದ ಮಕ್ಕಳಿಗೂ ಶಿಕ್ಷಣ, ಆಶ್ರಯ, ದಾಸೋಹ ನೀಡುವ ಮೂಲಕ ಇಡೀ ಕರ್ನಾಟಕದ ಮನೆ ಮನೆಯಲ್ಲೂ ದೇವರಂತೆ ನೆಲೆಸಿರುವ ಶಿವಕುಮಾರ ಸ್ವಾಮೀಜಿಯ ಜಯಂತಿ ಆಚರಣೆಯ ಜೊತೆಗೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು. ಅವರು ಸಾಮಜಕ್ಕೆ ಕೊಟ್ಟ ಕೊಡುಗೆಯನ್ನು ಸ್ಮರಿಸುವಂತೆ ಮುಖಂಡರು ಯುವ ಸಮುದಾಯಕ್ಕೆ ಕರೆ ನೀಡಿದರು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಸಮುದಾಯದ ಮುಖಂಡರಾದ ಹೆಚ್ ಎಸ್ ನಂಜುಂಡಪ್ರಸಾದ್, ಹಂಗಳ ನಂಜಪ್ಪ, ಕಮರಹಳ್ಳಿ ರವಿ, ಸುರೇಶ್ ಶಿವಪುರ, ಯುವ ಘಟಕ ಅಧ್ಯಕ್ಷ ಗುರುಪ್ರಸಾದ್, ವೀರಶೈವ ಮಹಾಸಭೆ ನಿರ್ದೇಶಕರುಗಳು, ಸಮುದಾಯದ ಯುವಕರು ಮತ್ತಿತರರಿದ್ದರು.





