ಚಾಮರಾಜನಗರ: ಬೈಕ್ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಸಂತೇಮರಹಳ್ಳಿಯಲ್ಲಿ ನಡೆದಿದೆ.
ಹೋಟೆಲ್ವೊಂದರ ಮಾಲೀಕರಾದ ಸಂತೇಮರಹಳ್ಳಿ ಗ್ರಾಮದ ಶಂಕರಪ್ಪ (65) ಮೃತಪಟ್ಟವರು.
ಶುಕ್ರವಾರ ರಾತ್ರಿ ಸಂತೇಮರಹಳ್ಳಿ-ಯಳಂದೂರು ಮಾರ್ಗದಲ್ಲಿರುವ ಕಾವೇರಿ ನೀರಾವರಿ ನಿಗಮದ ವಸತಿ ಗೃಹಗಳ ಮುಂಭಾಗ ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ಬಂದ ಬೈಕ್ ಡಿಕ್ಕಿ ಹೊಡೆದಿದ್ದು ಗುದ್ದಿದ ರಭಸಕ್ಕೆ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಕೊನೆ ಉಸಿರೆಳೆದರು.
ಬೈಕ್ ಸವಾರರನ್ನು ಯಳಂದೂರು ತಾಲ್ಲೂಕಿನ ಸೂರಾಪುರ ಗ್ರಾಮದವರೆಂದು ಗುರುತಿಸಲಾಗಿದೆ. ಈ ಸಂಬಂಧ ಸಂತೇಮರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





