Mysore
33
few clouds

Social Media

ಶನಿವಾರ, 07 ಮಾರ್ಚ್ 2026
Light
Dark

ಹನೂರು| ಕಗ್ಗತ್ತಲ್ಲಿನಲ್ಲಿದ್ದ ಎರಡು ಬಡ ಕುಟುಂಬಗಳಿಗೆ ಆಸರೆಯಾದ ಪೇದೆ ಕುಮಾರಸ್ವಾಮಿ: ಸಾರ್ವಜನಿಕರಿಂದ ಮೆಚ್ಚುಗೆ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು

ಹನೂರು: ಸ್ವಾತಂತ್ರ ಬಂದು 78 ವರ್ಷ ಪೂರ್ಣಗೊಂಡಿದ್ದರು ವಿದ್ಯುತ್ ಬೆಳಕು ನೋಡದೆ ಪ್ರತಿನಿತ್ಯ ಸೀಮೆಎಣ್ಣೆ ದೀಪ, ಮುಂಬತ್ತಿಯಲ್ಲಿ ವನ್ಯ ಮೃಗಗಳಂತೆ ಕಾಲ ಕಳೆಯುತ್ತಿದ್ದ ಎರಡು ಬಡ ಕುಟುಂಬಗಳಿಗೆ ಸ್ವಂತ ಹಣದಿಂದ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ಪೇದೆ ಕುಮಾರಸ್ವಾಮಿ ಮಾನವೀಯತೆ ಮೆರೆದಿದ್ದಾರೆ.

ಹೌದು ಚಾಮರಾಜನಗರ ತಾಲ್ಲೂಕಿನ ದಿ. ಮಾಜಿ ರಾಜ್ಯಪಾಲ ಆರ್ ರಾಚಯ್ಯ ಹಾಗೂ ಹಾಲಿ ಶಾಸಕ ಎ ಆರ್ ಕೃಷ್ಣ ಮೂರ್ತಿರವರ ತವರು ಗ್ರಾಮವಾದ ಆಲೂರು ಗ್ರಾಮದಲ್ಲಿನ ಮಹದೇವಮ್ಮ ಹಾಗೂ ರಾಜಮ್ಮ ಎಂಬುವವರು ಕಳೆದ 60 ವರ್ಷಗಳಿಂದ ವಿದ್ಯುತ್ ಸಂಪರ್ಕವಿಲ್ಲದೆ ಪ್ರತಿನಿತ್ಯ ಐದರಿಂದ 10 ಮುಂಬತ್ತಿ ಬಳಸಿ ಜೀವನ ನಡೆಸುತ್ತಿದ್ದರು.

ಕಳೆದ ತಿಂಗಳು ಪೊಲೀಸ್ ಇಲಾಖೆ ಜಾರಿಗೆ ತಂದಿರುವ ಆಸರೆ ಕಾರ್ಯಕ್ರಮದ ಪ್ರಯುಕ್ತ ಪ್ರತಿಯೊಬ್ಬ ಪೇದೆಗಳಿಗೂ ನಿಗದಿತ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ ವೃದ್ಧ ಕುಟುಂಬಗಳನ್ನು ಭೇಟಿ ಮಾಡಿ ಕಷ್ಟ ಸುಖಗಳನ್ನು ವಿಚಾರಿಸುವ ವೇಳೆ ನಮಗೆ ಯಾರು ದಿಕ್ಕಿಲ್ಲದೆ ಇರುವುದರಿಂದ ವಿದ್ಯುತ್ ಸಂಪರ್ಕ ಇಲ್ಲದೇ ಪ್ರತಿನಿತ್ಯ ತೊಂದರೆ ಆಗುತ್ತಿದೆ. ನಮಗೆ ವಿದ್ಯುತ್ ಸಂಪರ್ಕ ಕೊಡಿಸಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ಹಿಂದೆ ಮುಂದೆ ಯಾವುದನ್ನು ಯೋಚಿಸದ ಕುಮಾರಸ್ವಾಮಿ ಅವರು ಎರಡು ಕುಟುಂಬಗಳಿಗೆ ತಮ್ಮ ಸ್ವಂತ ಹಣದಲ್ಲಿಯೇ ಸುಮಾರು 30 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿ ವಿದ್ಯುತ್ ಸಂಪರ್ಕ ಕೊಡಿಸುವ ಮೂಲಕ ಮಾನವೀಯತೆ ಮರೆತಿದ್ದಾರೆ.

ಹಲವಾರು ವರ್ಷಗಳಿಂದ ಎರಡು ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೇ ಕಗ್ಗತ್ತಲಲ್ಲಿ ಕಾಲ ಕಳೆಯುತ್ತಿದ್ದರು. ಜನಪ್ರತಿನಿಧಿಗಳು, ಸ್ಥಳೀಯರು ಇವರನ್ನು ಗುರುತಿಸಿರಲಿಲ್ಲ. ಆದರೆ ಪೊಲೀಸ್ ಇಲಾಖೆಯ ಆಸರೆ ಕಾರ್ಯಕ್ರಮದ ಮೂಲಕ ಆಸರೆ ಆಗಿರುವುದು ನಿಜಕ್ಕೂ ಶ್ಲಾಘನೀಯವಾಗಿದೆ.

ಕುಮಾರಸ್ವಾಮಿರವರು ಈ ಹಿಂದೆ ಹನೂರು, ಚಾಮರಾಜನಗರ ಗ್ರಾಮಾಂತರ ಮಹಿಳಾ ಪೊಲೀಸ್ ಠಾಣೆಗಳಲ್ಲಿಯೂ ಉತ್ತಮವಾಗಿ ಕಾರ್ಯನಿರ್ವಹಿಸಿ ಅಧಿಕಾರಿಗಳಿಂದ ಪ್ರಶಂಸೆ ಪಡೆದುಕೊಂಡಿದ್ದಾರೆ. ಈಗ ಇವರ ಸೇವೆ ಇತರರಿಗೆ ಮಾದರಿಯಾಗಿದೆ.

Tags:
error: Content is protected !!