ಚಾಮರಾಜನಗರ: ನಗರದ 17ನೇ ವಾರ್ಡ್ ಉಪ್ಪಾರ ಬಡಾವಣೆಯಲ್ಲಿರುವ ಐತಿಹಾಸಿಕ ಶಿವನ ದೇಗುಲವಿದ್ದು, ಈ ದೇವಾಲಯದಲ್ಲಿ ಇದೀಗ ಪುಂಡ-ಪೋಕರಿಗಳ ದುಶ್ಚಟಗಳ ಅಡ್ಡೆಯಾಗಿದೆ.

ಈ ಐತಿಹಾಸಿಕ ಶಿವನ ದೇವಾಲಯವನ್ನು ಮೈಸೂರು ಮಹಾರಾಜರು ಕಟ್ಟಿಸಿದ್ದಾರೆ. ಆದರೆ ಈ ದೇಗುಲ ಈಗ ಪಾಳು ಬಿದ್ದ ಮಂಟಪವಾಗಿದೆ. ಹೀಗಾಗಿ ಕಿಡಿಗೇಡಿಗಳು ಶಿವಲಿಂಗದ ಮುಂದೆಯೇ ಇಲ್ಲಿ ಮದ್ಯಪಾನ ಮತ್ತು ಧೂಮಪಾನ ಸೇವನೆ ಮಾಡುತ್ತಿದ್ದಾರೆ.
ಇನ್ನೂ ಈ ಪಾಳುಬಿದ್ದರಿರುವ ಐತಿಹಾಸಿಕ ದೇವಾಲಯದಲ್ಲಿ ಅನೈತಿಕತೆ ಚಟುವಟಿಕೆಗಳ ಅಡ್ಡೆಯನ್ನಾಗಿ ಮಾಡಿಕೊಂಡಿರುವ ಕೆಲ ಪುಂಡರು ಮಾಡಿಕೊಳ್ಳುತ್ತಿರುವುದು ಇದೀಗ ಬೆಳಕಿಗೆ ಬಂದಿದೆ.





