ಮೈಸೂರು : ಕಳ್ಳ ಎಂದು ಭಾವಿಸಿ ಮಾನಸಿಕ ಅಸ್ವಸ್ಥನೊಬ್ಬನನ್ನು ಗ್ರಾಮಸ್ಥರು ಥಳಿಸಿ ಕಟ್ಟಿಹಾಕಿದ ಘಟನೆ ಎಚ್.ಡಿ. ಕೋಟೆ ತಾಲೂಕಿನ ಚಾಮಲಾಪುರ ಗ್ರಾಮದಲ್ಲಿ ನಡೆದಿದೆ.
ಈ ವೇಳೆ ಸ್ಥಳಕ್ಕಾಗಮಿಸಿದ ಹೊಯ್ಸಳ ಪೊಲೀಸ್ ಸಿಬ್ಬಂದಿ ಜಗದೀಶ್ ಹಾಗೂ ಗೋವಿಂದರಾಜು ಜನರನ್ನು ಸಮಾಧಾನಗೊಳಿಸಿದರು. ಬಳಿಕ ಆತನ ಮಾನಸಿಕ ಅಸ್ವಸ್ಥ ಎಂಬುದನ್ನು ಪತ್ತೆಹಚ್ಚಿ ನಂತರ ಸಮೀಪದ ಬೋಚಿಕಟ್ಟೆ ಗ್ರಾಮದ ಬುದ್ಧಿಮಾಂದ್ಯರ ಕೇಂದ್ರಕ್ಕೆ ಇರಿಸಿದ್ದಾರೆ.
ಈ ಬಳಿಕ ಮಾಹಿತಿ ತಿಳಿದ ಯುವಕನ ಮನೆಯವರು ತಮ್ಮ ವಾಸಸ್ಥಳ ಹಾಸನ ಜಿಲ್ಲೆಯ ಗುಡುಗನಹಳ್ಳಿಗೆ ಕರೆದೊಯ್ದಿದ್ದಾರೆ.