Mysore
25
haze

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮೈಸೂರು ಪೇಂಟ್ಸ್‌ಗೆ 75 : ಪ್ರಮೋದಾ ದೇವಿ ಒಡೆಯರ್‌ಗೆ ಆಹ್ವಾನ

ಮೈಸೂರು: ಶ್ರೀ ಮನ್ ಮಹಾರಾಜ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಸ್ಥಾಪಿಸಿದ ಮೈಸೂರು ಪೇಂಟ್ಸ್ &ವಾರ್ನಿಷ್ ಲಿ. (ಕರ್ನಾಟಕ ಸರ್ಕಾರದ ಉದ್ಯಮ) ೭೫ ವರ್ಷ ಪೂರೈಸಿರುವ ಸಂಬಂಧ ಇದೇ ೨೮ರಂದು ಅಮೃತ ಮಹೋತ್ಸವ ಜರುಗಲಿದ್ದು ಮಾನ್ಯ ಮುಖ್ಯಮಂತ್ರಿ ರವರು ಉದ್ಘಾಟಿಸಲಿರುವ ಈ ಕಾರ್ಯಕ್ರಮಕ್ಕೆ ರಾಜ ವಂಶಸ್ಥೆ ಶ್ರೀಮತಿ ಪ್ರಮೋದ ದೇವಿ ಒಡೆಯರ್ ರವರನ್ನು ಸಂಸ್ಥೆಯ ಅಧ್ಯಕ್ಷ ಆರ್. ರಘು (ಕೌಟಿಲ್ಯ) ರವರ ನೇತೃತ್ವದ ನಿಯೋಗ ಆಹ್ವಾನಿಸಿ ಸಮಾರಂಭದಲ್ಲಿ ಭಾಗವಹಿಸುವಂತೆ ವಿನಂತಿಸಿದರು.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ ಸ್ವಾಮಿ, ಪ್ರಧಾನ ವ್ಯವಸ್ಥಾಕ ಹರಕುಮಾರ್ ರವರೂ ನಿಯೋಗದಲ್ಲಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!