ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಕೇಂದ್ರ ಬಜೆಟ್ ಮಂಡಿಸಿದರು. ಈ ಬಜೆಟ್ನಲ್ಲಿ 25000 ರೂಪಾಯಿಗಳವರೆಗೆ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ಅನುಕೂಲವಾಗುವಂತಹ ಘೋಷಣೆಯೊಂದನ್ನು ಮಾಡಿದರು.
25000 ರೂಪಾಯಿಗಳವರೆಗೆ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೀಡಿರುವ ತೆರಿಗೆ ಪಾವತಿ ನೋಟಿಸ್ ಹಿಂಪಡೆಯುವ ಮಹತ್ವದ ನಿರ್ಧಾರವನ್ನು ಮಾಡಲಾಗಿದೆ. ಇದರಿಂದ ಬರೋಬ್ಬರಿ 1 ಕೋಟಿ ಜನರಿಗೆ ಅನುಕೂಲವಾಗಲಿದೆ. 2009 – 2010 ಹಣಕಾಸು ಅವಧಿಗೆ ಪೂರ್ಣಾನ್ವಯವಾಗುವಂತೆ ಈ ಸೌಲಭ್ಯವನ್ನು ನೀಡಲಾಗುತ್ತದೆ ಎಂದು ಹೇಳಿದರು.
ಹಾಗೆಯೇ 2010-2011ರಿಂದ 2014-15ರವರೆಗೆ 10000 ರೂಪಾಯಿಗಳವರೆಗೆ ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೀಡಿರುವ ತೆರಿಗೆ ಪಾವತಿ ನೋಟಿಸ್ ಹಿಂಪಡೆಯುವ ನಿರ್ಧಾರವನ್ನೂ ಸಹ ಮಾಡಲಾಗಿದೆ.