Mysore
20
overcast clouds
Light
Dark

ಇಂದಿರಾ ಗಾಂಧಿ ಹತ್ಯೆ ಮಾಡಿದವನ ಪುತ್ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ !

ಛಂಡೀಗಢ : ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಕೋರ ಬಿಯಾಂತ್ ಸಿಂಗ್ ಪುತ್ರ ಸರಬ್‌ಜಿತ್ ಸಿಂಗ್ ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಪಂಜಾಬ್‌ನ ಫರೀದ್‌ಕೋಟದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ತಿಳಿಸಿದ್ದಾನೆ.

ಮೆಗಾಸ್ಟಾರ್ ಪುತ್ರನಿಗೆ ಡಾಕ್ಟರೇಟ್ ಘೋಷಣೆ – ಏಪ್ರಿಲ್ 13 ರಂದು 2004ರ ಲೋಕಸಭಾ ಚುನಾವಣೆಯಲ್ಲಿ ಭಟಿಂಡ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸಿಂಗ್ 1.13 ಲಕ್ಷ ಮತ ಪಡೆದಿದ್ದ. 2014ರಲ್ಲೂ ಫತೇಹ್‌ಗಢ ಸಾಹೀಬ್ ಕ್ಷೇತ್ರದಲ್ಲಿ ಪರಾಜಿತಗೊಂಡಿದ್ದ. 2007ರಲ್ಲಿ ಪಂಜಾಬ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದನು.

ಇನ್ನು, ಸರಬ್‌ಜಿತ್ ಅವರ ತಾಯಿ ಬಿಮಾಲ್ ಕೌರ್ 1989ರಲ್ಲಿ ಲೋಕಸಭೆಗೆ ಆಯ್ಕೆಯಾಗಿದ್ದರು.