ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಹಬ್ಬದ ಕೊನೇಯ ದಿನವಾದ ಇಂದು ವಿಜಯದಶಮಿ ಹಿನ್ನೆಲೆಯಲ್ಲಿ ಅರಮನೆ ಸಂಪ್ರದಾಯದಂತೆ ವಜ್ರಮುಷ್ಠಿ ಕಾಳಗ ನಡೆಯಿತು.
ಅರಮನೆಯ ಶ್ವೇತ ವರಹ ದೇವಸ್ಥಾನದಲ್ಲಿ ವಜ್ರಮುಷ್ಠಿ ಕಾಳಗ ನಡೆಯಿತು. ಜಗಜಟ್ಟಿಗಳ ನಡುವಿನ ಕಾದಾಟದಲ್ಲಿ ರಕ್ತ ಚಿಮ್ಮುವವರೆಗೂ ಹೋರಾಟ ನಡೆಸಿದ್ದು , ಸಾವಿರಾರು ಜನರು ಈ ಕಾಳಗಕ್ಕೆ ಸಾಕ್ಷಿ ಆದರು
ವಜ್ರಮುಷ್ಠಿ ಕಾಳಗದಲ್ಲಿ ಪ್ರಮೋದ್ ಜಟ್ಟಿ ಯಿಂದ ಚಾಮರಾಜನಗರದ ವೆಂಕಟೇಶ್ ಜಟ್ಟಿಗೆ ಪ್ರಹಾರ ಮಾಡಲಾಯಿತು. ಇದೇ ವೇಳೆ ಚನ್ನಪಟ್ಟಣದ ಪ್ರವೀಣ್ ಜಟ್ಟಿ ಮೈಸೂರಿನ ಪ್ರದೀಪ್ ಜಟ್ಟಿಗೆ ಪ್ರಹಾರಮಾಡಿದ್ದು ತಲೆಯಿಂದ ರಕ್ತ ಚಿಮ್ಮಿತು. ಜಟ್ಟಿಗಳ ನಡುವೆ ನಡೆದ ವಜ್ರಮುಷ್ಠಿ ಕಾಳಗರೋಚಕವಾಗಿತ್ತು .





