ಹಲಗೂರು : ಸಮೀಪದ ತೊರೆಕಾಡನಹಳ್ಳಿ ಗ್ರಾಮದ ಗುತ್ತಿಗೆದಾರ ಗೋಪಾಲ್ ರವರ ಮನೆಯಲ್ಲಿ ದಾಖಲೆ ಇಲ್ಲದ ₹11.76 ಲಕ್ಷ ಹಣವನ್ನು ಚುನಾವಣಾ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಆಧರಿಸಿ ದಾಳಿ ಮಾಡಿದ ಚುನಾವಣಾ ವಲಯ ಅಧಿಕಾರಿ ಮಂಜುನಾಥ್ ನೇತೃತ್ವದ ತಂಡ ಗುತ್ತಿಗೆದಾರ ಗೋಪಾಲ್ ರವರ ಮನೆಯ ಮೇಲೆ ದಾಳಿ ಮಾಡಿದಾಗ ₹11.76 ಲಕ್ಷ ಹಣವನ್ನು ಅಧಿಕಾರಿಗಳು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಾಚರಣೆಯಲ್ಲಿ ಚುನಾವಣಾ ಅಧಿಕಾರಿಗಳಾದ ಪುಟ್ಟಯ್ಯ, ವೆಂಕಟೇಶ್, ರಾಮಕೃಷ್ಣ, ಸಿಪಿಐ ಜಗದೀಶ್, ಪಿಎಸ್ಐ ಮಹೇಂದ್ರ ಸೇರಿದಂತೆ ಹಲವರು ಇದ್ದರು.