Mysore
21
clear sky

Social Media

ಗುರುವಾರ, 12 ಮಾರ್ಚ್ 2026
Light
Dark

ಓದುಗರ ಪತ್ರ:  ಚುನಾವಣೆ ಬಂದಾಗ ತೆರಿಗೆ ಕಡಿತ

ಓದುಗರ ಪತ್ರ

ಸರ್ಕಾರ ಜನೋಪಯೋಗಿ ಸೇವೆ ಮತ್ತು ಸರಕುಗಳ ತೆರಿಗೆ ದರ ಇಳಿಸಿದರೆ, ಇಳಿಸಲು ಪ್ರಸ್ತಾಪ ಮಾಡಿದರೆ, ಕ್ರಮ ತೆಗೆದುಕೊಂಡರೆ ಚುನಾವಣೆ ಹತ್ತಿರದಲ್ಲಿದೆ ಎನ್ನುವುದು ಅಲಿಖಿತ ನಿಯಮಾವಳಿ.

ಕಳೆದ ನವೆಂಬರ್‌ನಲ್ಲಿಯೇ ಕೇಂದ್ರ ಸರ್ಕಾರ ಜಿಎಸ್‌ಟಿ ದರವನ್ನು ಇಳಿಕೆ ಮಾಡಬೇಕಿತ್ತು. ಸಾಧಕ-ಬಾಧಕಗಳ ಹೆಸರಿನಲ್ಲಿ ವಿಸ್ತೃತವಾಗಿ ಚರ್ಚಿಸಲು ಅದನ್ನು ಮುಂದೆ ಹಾಕುತ್ತಾ ಬರಲಾಗಿತ್ತು.

ಬಿಹಾರ ಚುನಾವಣೆ ಹೊತ್ತಿಗೆ ಅಕ್ಟೋಬರ್‌ನಲ್ಲಿ ಇಳಿಸಲು ನಿರ್ಧರಿಸಿದ್ದು, ಈಗ ಅಂತಹ ಕ್ರಮ ಚುನಾವಣೆ ನೀತಿ ಸಂಹಿತೆಗೆ ತೊಡಕಾಗಬಹುದೆಂದು ದಸರಾ ಹಬ್ಬಕ್ಕೇ ಈ ಕೊಡುಗೆ ನೀಡಲು ಮುಂದಾಗಿದೆ ಎನ್ನುವ ವರದಿ ಇದೆ. ಹಾಗೆಯೇ ತೈಲ ಕಂಪೆನಿ ಗಳಿಗೆ ೨೫,೦೦೦ ಕೋಟಿ ರೂ. ಸಹಾಯ ಧನ ನೀಡಲು ಮುಂದಾಗಿದ್ದು, ಅಡುಗೆ ಅನಿಲ ದರ ಕೂಡಾ ಇಳಿಯುವ ಸಾಧ್ಯತೆ ಇದೆ.

-ಎಸ್.ರಮಾನಂದ, ಬೆಂಗಳೂರು

Tags:
error: Content is protected !!