ಮೈಸೂರಿನ ನ್ಯೂ ಕಾಂತರಾಜ್ ಅರಸ್ ರಸ್ತೆಯ ಕನ್ನೇಗೌಡನ ಕೊಪ್ಪಲಿನ ಪ್ರವೇಶ ದ್ವಾರದಲ್ಲಿರುವ ರೈಲ್ವೆ ಕೆಳಸೇತುವೆ ಅತ್ಯಂತ ಚಿಕ್ಕದಾಗಿದ್ದು, ಈ ಕೆಳಸೇತುವೆಯ ಮೂಲಕವೇ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ರೈಲ್ವೇ ಸ್ಟೇಷನ್, ಗ್ರಾಮಾಂತರ ಬಸ್ ನಿಲ್ದಾಣ, ಬೆಂಗಳೂರಿಗೆ ಪ್ರಯಾಣ ಮಾಡುವವರು, ಕೋರ್ಟ್ -ಕಚೇರಿಗಳಿಗೆ ಹೋಗುವವರು, ಸಿಟಿ ಮಾರ್ಕೆಟ್ಗೆ ಹೋಗುವವರು ಹಾಗೂ ವ್ಯಾಪಾರ ವಹಿವಾಟಿಗೆ ಹೋಗುವವರು ಈ ಕೆಳಸೇತುವೆಯನ್ನು ಹಾದುಹೋಗಬೇಕಾಗಿದೆ.
ಈ ಕೆಳಸೇತುವೆ ಚಿಕ್ಕದಾಗಿದ್ದು, ವಾಹನ ಸಂಚಾರಕ್ಕೆ ತೀವ್ರ ತೊಂದರೆಯಾಗುತ್ತಿದೆ. ಒಮ್ಮೊಮ್ಮೆ ಕನ್ನೇಗೌಡನಕೊಪ್ಪಲಿನ ರಸ್ತೆ ಉದ್ದಕ್ಕೂ ವಾಹನ ದಟ್ಟಣೆಯಾಗುತ್ತದೆ. ಇದರಿಂದಾಗಿ ಇಲ್ಲಿ ಸಣ್ಣಪುಟ್ಟ ಅಪಘಾತಗಳೂ ಸಂಭವಿಸುತ್ತಲೇ ಇವೆ. ಈ ಕೆಳ ಸೇತುವೆ ಎಡಭಾಗಕ್ಕೆ ಸಾಕಷ್ಟು ಜಾಗ ಇರುವುದರಿಂದ, ಈ ಕೆಳ ಸೇತುವೆಯನ್ನು ಅಗಲೀಕರಣ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು.
– ಬೂಕನಕೆರೆ ವಿಜೇಂದ್ರ, ಕುವೆಂಪುನಗರ, ಮೈಸೂರು





