Mysore
33
few clouds

Social Media

ಶನಿವಾರ, 07 ಮಾರ್ಚ್ 2026
Light
Dark

ಓದುಗರ  ಪತ್ರ:  ದಸರಾ ಉದ್ಘಾಟನೆ ದಿನ ಸಾರ್ವಜನಿಕರಿಗೆ ನಿರ್ಬಂಧ ಸರಿಯಲ್ಲ

ಓದುಗರ ಪತ್ರ

ದಸರಾ ಉದ್ಘಾಟನೆ ದಿನ ಸಾರ್ವಜನಿಕರಿಗೆ ನಿರ್ಬಂಧ ಹೇರಿರುವುದು ಸರಿಯಲ್ಲ . ಇದು ಸರ್ಕಾರದ ಭದ್ರತೆ ವೈಫಲ್ಯತೆಯನ್ನು ಎತ್ತಿ ತೋರಿಸುತ್ತಿದೆ. ಈಗಾಗಲೇ ಪೊಲೀಸ್ ಇಲಾಖೆಯವರು ಚಾಮುಂಡಿ ಬೆಟ್ಟದ ನಿವಾಸಿಗಳ ಸಭೆ ಕರೆದು ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕು, ತಮ್ಮ ಮನೆಗೆ ಯಾರಾದರೂ ಹೊಸದಾಗಿ ಬಂದರೆ ನಮಗೆ ತಿಳಿಸಬೇಕು. ತಾವೆಲ್ಲರೂ ದಸರಾ ಉದ್ಘಾಟನೆ ದಿನ ಹೊರಗೆ ಬರಬಾರದು, ದಸರಾ ಉದ್ಘಾಟನೆಯನ್ನು ಟಿವಿಯಲ್ಲಿ ನೋಡಿಕೊಳ್ಳಬೇಕು ಎಂದು ಫರ್ಮಾನು ಹೊರಡಿಸಿದ್ದಾರೆ.

ಇದೆಲ್ಲವನ್ನೂ ಗಮನಿಸಿದರೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಳ್ವಿಕೆಯಲ್ಲಿ ನಡೆಯುತ್ತಿದ್ದಂತಹ ದಸರಾ ಜನರ ದಸರಾ ಆಗಿತ್ತು, ಆದರೆ ಈಗ ನಡೆಯುತ್ತಿರುವ ದಸರಾ ಸರ್ಕಾರದ ತುಘಲಕ್ ದರ್ಬಾರಿನ ದಸರಾ ಆಗಿದೆಯೇ ಎಂಬ ಸಂಶಯ ಮೂಡಿದೆ. ದಸರಾ ಉದ್ಘಾಟನೆ ಕಾರ್ಯಕ್ರಮ ಜನಪ್ರತಿನಿಽಗಳಿಗೆ ಮತ್ತು ಅಧಿಕಾರಿಗಳ ಕುಟುಂಬಗಳಿಗೆ ಮಾತ್ರ ಸೀಮಿತವಾಗಿದೆ. ಈ ರೀತಿಯ ದಸರಾ ನಮಗೆ ಬೇಕಿತ್ತಾ ಎಂಬ ಯಕ್ಷಪ್ರಶ್ನೆ ಕಾಡುತ್ತಿದೆ.

ಸರ್ಕಾರದ ಈ ನಿರ್ಧಾರವನ್ನು ನೋಡಿದರೆ ದಸರಾ ಮೆರವಣಿಗೆ ವೀಕ್ಷಿಸಲು ಬರುವ ಲಕ್ಷಾಂತರ ಜನರಿಗೆ ಯಾವ ರೀತಿಯ ಭದ್ರತೆ ಕೊಡುತ್ತದೆ ಎಂಬುದು ಪ್ರಶ್ನೆಯಾಗಿದೆ. ಹೋರಾಟಗಾರರು ಉಗ್ರಗಾಮಿಗಳಲ್ಲ, ಅವರೆಲ್ಲರನ್ನೂ ಕರೆದು ಸಭೆ ಮಾಡಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ನೋಡಿಕೊಳ್ಳಬೇಕಾದದ್ದು ಸರ್ಕಾರದ ಕರ್ತವ್ಯ. ಸಾರ್ವಜನಿಕರಿಗೆ ಪ್ರವೇಶವಿಲ್ಲವೆಂದರೆ ಅದು ಸರ್ಕಾರಕ್ಕೆ ಅವಮಾನ. ಸರ್ಕಾರ ಎಚ್ಚೆತ್ತು ಕೂಡಲೇ ಸಾರ್ವಜನಿಕರಿಗೆ ಮುಕ್ತ ಅವಕಾಶವಿದೆ ಎಂದು ಘೋಷಿಸಲಿ.

-ಎಸ್. ಬಾಲಕೃಷ್ಣ,ಅಧ್ಯಕ್ಷರು, ಮೈಸೂರು ಕನ್ನಡ ವೇದಿಕೆ

Tags:
error: Content is protected !!