Mysore
24
broken clouds

Social Media

ಸೋಮವಾರ, 30 ಮಾರ್ಚ್ 2026
Light
Dark

ಓದುಗರ ಪತ್ರ: ಪೌರ ಕಾರ್ಮಿಕರನ್ನು ಗೌರವಿಸಿ

ಓದುಗರ ಪತ್ರ

ಪೌರ ಕಾರ್ಮಿಕರು ಮೈಸೂರು ನಗರದಾದ್ಯಂತ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಹಬ್ಬ ಹರಿದಿನಗಳು ಅದರಲ್ಲೂ ಮುಖ್ಯವಾಗಿ ದಸರಾ ಸಂದರ್ಭದಲ್ಲಿ ನಿಗದಿತ ಅವಧಿಗಿಂತಲೂ ಹೆಚ್ಚು ಸಮಯ ಕೆಲಸ ಮಾಡುವ ಮೂಲಕ ನಗರದ ಸ್ವಚ್ಛತೆ ಕಾಪಾಡಲು ಶ್ರಮಿಸುತ್ತಾರೆ. ದಸರಾ ಹಬ್ಬದ ನಂತರವೂ ನಗರವನ್ನು ಸ್ವಚ್ಛಗೊಳಿಸುವ ಮೂಲಕ ಸುಂದರವಾಗಿಡಲು ಶ್ರಮಿಸುತ್ತಾರೆ.

ಜಿಲ್ಲಾಡಳಿತದಿಂದ ಆನೆಗಳ ಮಾವುತರು ಹಾಗೂ ಕಾವಾಡಿಗಳು ಮತ್ತು ಅವರ ಕುಟುಂಬದವರಿಗೆ ಔತಣ ಕೂಟ ಏರ್ಪಡಿಸಿದಂತೆ ನಗರದ ಸ್ವಚ್ಛತೆಗೆ ನಿರಂತರವಾಗಿ ಶ್ರಮಿಸುವ ಪೌರ ಕಾರ್ಮಿಕರಿಗೆ ಔತಣ ಕೂಟ ಏರ್ಪಡಿಸುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಬೇಕಾಗಿದೆ.

– ಎ.ಜಿ. ಚಂದ್ರಲಾ ಪ್ರಥಮ ಬಿಎ, ಪತ್ರಿಕೋದ್ಯಮ, ಮಹಾರಾಜ ಕಾಲೇಜು, ಮೈಸೂರು

Tags:
error: Content is protected !!