Mysore
15
clear sky

Social Media

ಬುಧವಾರ, 21 ಜನವರಿ 2026
Light
Dark

ಓದುಗರ ಪತ್ರ: ನಕಲಿ ಹಾವಳಿಗೆ ಕಡಿವಾಣ ಹಾಕಿ

ಓದುಗರ ಪತ್ರ

ಇತ್ತೀಚಿನ ದಿನಗಳಲ್ಲಿ ದಿನ ನಿತ್ಯ ಬಳಸುವ ತುಪ್ಪ, ಅಡುಗೆ ಎಣ್ಣೆ ಮೊದಲಾದ ಅಗತ್ಯ ವಸ್ತುಗಳನ್ನು ನಕಲು ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ. ನಕಲಿ ತುಪ್ಪ ತಯಾರಿಸಲು ಹಾಲಿನ ಉತ್ಪನ್ನವನ್ನು ಬಳಸದೇ ಕೇವಲ ರಾಸಾಯನಿಕಗಳನ್ನೇ ಬಳಸುತ್ತಿರುವುದರಿಂದ ಗ್ರಾಹಕರು ಗೊತ್ತಿಲ್ಲದೇ ಸೇವಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದು ಖಚಿತ.

ಆಹಾರ ಗುಣಮಟ್ಟ ಪರೀಕ್ಷಿಸಲು ಕೇಂದ್ರ ಸರ್ಕಾರ ಆಹಾರ ಗುಣಮಟ್ಟ ಪರಿಶೀಲನಾ ವಿಭಾಗವನ್ನೇ ಸ್ಥಾಪಿಸಿದ್ದರೂ ನಕಲಿ ಉತ್ಪನ್ನಗಳು ಜನರನ್ನು ತಲುಪುತ್ತಿರುವುದು ಬೇಸರದ ಸಂಗತಿಯಾಗಿದೆ. ಸಂಬಂಧಪಟ್ಟವರು ನಕಲಿ ಉತ್ಪನ್ನಗಳನ್ನು ತಯಾರಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಮೂಲಕ ಗ್ರಾಹಕರ ಹಿತ ಕಾಪಾಡಬೇಕಾಗಿದೆ.

– ರಮೇಶ್, ಮೈಸೂರು

Tags:
error: Content is protected !!