Mysore
33
clear sky

Social Media

ಭಾನುವಾರ, 15 ಮಾರ್ಚ್ 2026
Light
Dark

ಓದುಗರ ಪತ್ರ:  ಯುಜಿಡಿ ಕಾಮಗಾರಿ ಪುರ್ಣಗೊಂಡರೂ ರಸ್ತೆಗೆ ಡಾಂಬರ್ ಹಾಕದ ನಗರಪಾಲಿಕೆ

ಓದುಗರ ಪತ್ರ

ಮೈಸೂರಿನ ಗೋಕುಲಂ ಹಾಗೂ ನಂದಗೋಕುಲ ಬಡಾವಣೆಯ ಬಳಿ ಅರಳಿಮರ ಬಸ್ ನಿಲ್ದಾಣದಿಂದ ನಿರ್ಮಲಾ ಕಾನ್ವೆಂಟ್ ವರೆಗಿನ ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ದಿನನಿತ್ಯ ಕಿರಿಕಿರಿ ಉಂಟಾಗುತ್ತಿದೆ.

ಯುಜಿಡಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ಅಗೆದ ರಸ್ತೆಗೆ ಡಾಂಬರು ಹಾಕದೇ ಪಾಲಿಕೆ ಅಧಿಕಾರಿಗಳು ನಿರ್ಲಕ್ಷ  ವಹಿಸಿದ್ದಾರೆ.

ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿದ್ದು, ಮಳೆ ಬಂದಾಗ ಈ ಗುಂಡಿಗಳಲ್ಲಿ ನೀರುತುಂಬಿ ವಾಹನ ಸವರರು ಬಿದ್ದು ಗಾಯಗೊಂಡಿರುವ ಘಟನೆಗಳು ನಡೆದಿವೆ. ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕೂಡಲೇ ಗುಂಡಿಗಳನ್ನು ಮುಚ್ಚುವ ಮೂಲಕ ವಾಹನ ಸವಾರರಿಗೆ ಆಗುತ್ತಿರುವ ತೊಂದರೆಯನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕಾಗಿದೆ.

-ಆರ್.ಯಶಸ್, ಮೈಸೂರು

Tags:
error: Content is protected !!